– ಸಂಜೆ 5 ಗಂಟೆಯಿಂದ ಮದ್ಯ ನಿಷೇಧ
– 144 ಸೆಕ್ಷನ್ ಜಾರಿ
ಬೆಂಗಳೂರು: ಆರ್ಆರ್ ನಗರದಲ್ಲಿ ಇಂದು 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಹಾಕಲಾಗುತ್ತದೆ. ಸಂಜೆ 6 ಗಂಟೆಯ ನಂತರ ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ. ಮತದಾರರು ಬಿಟ್ಟು ಬೇರೆ ಯಾರು ಕ್ಷೇತ್ರದಲ್ಲಿ ಇರುವಂತಿಲ್ಲ. ಮುಖಂಡರು, ನಾಯಕರು ಇರಲು ಅವಕಾಶ ಇಲ್ಲ. ತಕ್ಷಣವೇ ಸಂಜೆ ವೇಳೆಗೆ ಕ್ಷೇತ್ರ ಬಿಡಬೇಕು. ಕ್ಷೇತ್ರದಲ್ಲಿ ಇದ್ದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಆರ್ಆರ್ ನಗರ ಚುನಾವಣೆಗೆ ಇನ್ನು ಒಂದೇ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆ ಹಾಗೂ ಭದ್ರತೆ ಬಗ್ಗೆ ನಗರದಲ್ಲಿಂದು ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂಥ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಆರ್ ಆರ್ ನಗರದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳ ನೇಮಕ 9 ಹೆಚ್ಚುವರಿ ತಂಡ, ವಿಎಸ್ ಟಿ ತಂಡ 8 ನೇಮಕ, 38 ಮಾರ್ಷಲ್ ಗಳ ತಂಡ, ವಿಡಿಯೋಗ್ರಾಫರ್ ತಂಡ 5, 56 ಸೆಕ್ಟರ್ ಆಫೀಸರ್, 8 ಅಬಕಾರಿ ತಂಡಗಳನ್ನು ನೇಮಕ ಮಾಡಲಾಗಿದೆ. ವಾಹನಗಳ ತಪಾಸಣೆ ನಡೆಯಲಿದ್ದು, ಕಲ್ಯಾಣ ಮಂಟಪ, ಜನ ಸೇರುವ ಕಡೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಂಜೆ 5 ಗಂಟೆಯಿಂದ 144 ಸೆಕ್ಷನ್ ಹಾಗೂ ಮದ್ಯ ನಿಷೇಧ ಸಹ ಜಾರಿ ಮಾಡಲಾಗುತ್ತಿದೆ. ಎಕ್ಸಿಟ್ ಪೋಲ್, ಜನಾಭಿಪ್ರಾಯ ಪೋಲ್ ಹಾಕುವಂತಿಲ್ಲ. ನ.3 ರಂದು ಬೆಳಗ್ಗೆ ನ. 7 ಗಂಟೆವರೆಗೂ ಎಕ್ಸಿಟ್ ಪೋಲ್ ಸಹ ಮಾಡುವಂತಿಲ್ಲ. ನಾಳೆ ಮಾಸ್ಟರಿಂಗ್ ಸೆಂಟರ್ ಗಳ ಒಪನ್ ಆಗಲಿದೆ. ಜ್ಞಾನಾಕ್ಷಿ ವಿದ್ಯಾನಿಕೇತನಗಳು ಓಪನ್ ಆಗಲಿದೆ. ಪೋಲಿಂಗ್ ಮೆಟಿರಿಯಲ್ ಕಲೆಕ್ಟ್ ಮಾಡಲಾಗುತ್ತದೆ. ಸಂಜೆ ಪೊಲಿಂಗ್ ಸೆಂಟರ್ ತಲುಪಿದ ವರದಿ ಪಡೆಯಬೇಕಾಗಿದೆ. 678 ಬೂತ್ ಗಳಿವೆ. ಆರೋಗ್ಯಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.
ಕ್ಯೂ ನಲ್ಲಿ ನಿಂತ ಜನರಿಗೆ ಕೊರೊನಾ ಮುನ್ನೆಚ್ಚರಿಕೆ ಪಾಲಿಸಲು ಆರೋಗ್ಯ ಇಲಾಖಾ ಸಿಬ್ಬಂದಿಯನ್ನು ನೇಮಿಸಲಾಗುವುದು. ಕೋವಿಡ್ ಪೇಷಂಟ್ ಒಪ್ಪಿದ್ದರೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು. ಕೊರೊನಾ ರೋಗಿ ಮತ ಹಾಕಿ ಎಂದಾಗ ಸಿಬ್ಬಂದಿ ಜೊತೆ ಗದರಿದ ಪ್ರಕರಣಗಳು ಕೂಡ ನಡೆದಿದೆ. 125 ಬಸ್, 50 ಮಿನಿ ಬಸ್, ಜಿಪಿಎಸ್ ಆಳವಡಿಕೆ ಇದೆ. ಪೋಸ್ಟಲ್ ಬ್ಯಾಲೆಟ್ 5050 ವ್ಯವಸ್ಥೆ ಆಗಿತ್ತು. 489 ಮತದಾರರು, 22 ವಿಶೇಷಚೇತನ ಮತದಾರರು ಮತ ಹಾಕಿದ್ದಾರೆ. ವೋಟರ್ ಸ್ಲಿಪ್ ಮನೆ ಮನೆಗೆ ಹಂಚಲಾಗಿದೆ. ಕೋವಿಡ್ 19 ಉಲ್ಲಂಘಿತ 14 ಪ್ರಕರಣಗಳು ಪಾಲಿಕೆ ದಾಖಲೆ ಮಾಡಿದೆ. ಎಸ್ ಸಿಸಿ ನೀತಿ ಸಹ ಉಲ್ಲಂಘನೆ ಮಾಡಿದೆ ಎಂದರು.
ಇದೇ ವೇಳೆ ಕಮಲ್ ಪಂತ್ ಮಾತನಾಡಿ, 21 ದಿನದಲ್ಲಿ ಚುನಾವಣಾ ಪ್ರಚಾರ ಪ್ರಕ್ರಿಯೆ ಶಾಂತ ರೀತಿಯಾಗಿ ನಡೆದು ಬಂದಿದೆ. ಸಣ್ಣಪುಟ್ಟ ಪ್ರಸಂಗ ಬಂದಾಗ ಪೊಲೀಸರು ನಿಭಾಯಿಸಿದ್ದಾರೆ. ಒಂದೇ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ ಎಂದರು.
30 ತಂಡ ಭದ್ರತೆಗಾಗಿ ನೇಮಕ ಮಾಡಲಾಗಿತ್ತು. ಇಂದು ಪ್ರಚಾರದ ಕಡೆ ದಿನವಾಗಿದ್ದರಿಂದ ಬಂದೋಬಸ್ತ್ ಗೆ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. 678 ಬೂತ್ ಗಳಿವೆ. 82 ಸೂಕ್ಷ್ಮ ಮತಗಟ್ಟೆ ಇದೆ. 181 ಜಾಗಗಳಲ್ಲಿ ಮತಗಟ್ಟೆ ಇದೆ. ಪ್ರತ್ಯೆಕವಾಗಿ ಎಎಸ್ ಐ ಹಾಗೂ ಮೂವರು ಸಿಬ್ಬಂದಿ ಇರುತ್ತಾರೆ. ಹೋಂ ಗಾರ್ಡ್ ಸಹ ಬೂತ್ ಗಳಲ್ಲಿ ನೇಮಕ ಮಾಡಲಾಗಿದೆ. 2563 ಜನ ಭದ್ರತೆಗಾಗಿ ನಿಯೋಜನೆ, ಮೊಬೈಲ್ ವ್ಯವಸ್ಥೆ ಮಾಡಲಾಗಿದೆ. ಇದು ಸ್ವಲ್ಪ ಸೂಕ್ಷ್ಮಪ್ರದೇಶವಾಗಿದ್ದರಿಂದ ಲಾ ಅಂಡ್ ಆರ್ಡರ್ ಸಹ ನೋಡಿಕೊಳ್ಳಬೇಕಾಗಿದೆ. 102 ಮೊಬೈಲ್ 24 ಗಂಟೆ ಕೆಲಸ ಮಾಡಲಿದೆ. 91 ಚೀತಾ ಇಬ್ಬರು ಪೊಲೀಸರ ಕೆಲಸದಲ್ಲಿ ಇರ್ತಾರೆ . ತುರ್ತು ಪರಿಸ್ಥಿತಿ ವೇಳೆ 5 ನಿಮಿಷದಲ್ಲಿ ರೀಚ್ ಆಗ್ತಾರೆ. ಇಡೀ ದಿನ 3 ಡಿಸಿಪಿ, 30 ಇನ್ಸಪೆಕ್ಟರ್ 560 ಜನ ಕೆಲಸದಲ್ಲಿ ಇರ್ತಾರೆ. ಪ್ಯಾರಾ ಮಿಲಿಟರಿ ಫೋರ್ಸ್ ಸಹ ಭಾಗವಾಹಿಸಲಿದ್ದಾರೆ. 19 ಕೆಎಸ್ ಆರ್ ಪಿ ತುಕಡಿ, 20 ಆರ್ಮ್ ರಿಸರ್ವ ಸಹ ಇರಲಿದ್ದಾರೆ. ಚುನಾವಣೆ ಆಯೋಗ ನಿದೇರ್ಶನ ಪ್ರಕಾರ 300 ಶಸ್ತ್ರ ಸೀಜ್ ಆಗಿದೆ ಎಂದರು.