ಮಗಳ ಮದುವೆಗೆ ಬಟ್ಟೆ ಖರೀದಿಸಲು ಹೋದವರು ದುರ್ಮರಣ

Public TV
1 Min Read
hyderabad

– 6 ಮಂದಿ ಸ್ಥಳದಲ್ಲೆ ಸಾವು

ಹೈದರಾಬಾದ್: ಮದುವೆಗೆ ಬಟ್ಟೆ ಖರೀದಿಸಲು ತೆರಳಿದ್ದ ವಧು ಹಾಗೂ ಕುಟುಂಬಸ್ಥರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನ ಮೆಹಬೂಬಬಾದ್‍ನಲ್ಲಿ ನಡೆದಿದೆ.

wedding

ಮೃತರನ್ನು ಪರಿಮಳಾ, ತಂದೆ ಜತೂತ್ ಕಾಸ್ನಾ, ತಾಯಿ ಜತೂತ್ ಕಲ್ಯಾಣಿ ಹಾಗೂ ಸಹೋದರ ಜತೂತ್ ಪ್ರದೀಪ್ ಮತ್ತು ಸಂಬಂಧಿಕರಾದ ಜತೂತ್ ಪ್ರಸಾದ್, ಅವರ ಮಗಳು ಜಲೂತ್ ದಿವ್ಯಾ ಮತ್ತು ಆಟೋ ಚಾಲಕ ಜತೂತ್ ರಾಮು ಎಂದು ಗುರುತಿಸಲಾಗಿದೆ. ಇವರು ಮೂಲತಃ ಎರ್ರಕುಂಟಾ ತಾಂಡಾ ಮೂಲದವರಾಗಿದ್ದಾರೆ.

speed road hump

ಮೃತರು ವಿವಾಹ ಸಮಾರಂಭಕ್ಕಾಗಿ ವಧುವಿನ ಕುಟುಂಬಸ್ಥರು 6 ಮಂದಿ ಸೇರಿ ಬಟ್ಟೆ ಖರೀದಿಸಲು ಆಟೋದಲ್ಲಿ ತೆರಳಿದ್ದರು. ಈ ವೇಳೆ ವೇಗವಾಗಿ ಎದುರುಗಡೆಯಿಂದ ಬಂದ ಲಾರಿ ಆಟೋಕ್ಕೆ ಗುದ್ದಿದ ಪರಿಣಾಮ ಆಟೋದಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ಲಾರಿ ಆಟೋಕ್ಕೆ ಗುದ್ದಿ ರಭಸಕ್ಕೆ ಆರು ಮಂದಿ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

accident web 4

ಈ ದುರಂತ ಕುರಿತಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *