ನವದೆಹಲಿ: ಮಗಳು ಹೇಳಿದಲೆಂಬ ಕಾರಣಕ್ಕಾಗಿ ಎರಡನೇ ಮದುವೆಯಾಗಿರುವುದಾಗಿ ಹೇಳಿಕೆ ಕೊಡುವುದರ ಮೂಲಕ ತಮ್ಮ ಸಂಸಾರದ ಗುಟ್ಟನ್ನು ಬಿಚ್ಚಿದ್ದಾರೆ ಭೋಜ್ಪುರಿ ಗಾಯಕ, ಬಿಜೆಪಿ ಸಂಸದ ಮನೋಜ್ ತಿವಾರಿ.
ಇತ್ತಿಚೇಗೆ ಮನೋಜ್ ತಿವಾರಿ ತಮ್ಮ ಎರಡನೇ ಮದುವೆಯಾಗಿ ಮಗು ಪಡೆದ ಕಾರಣಕ್ಕಾಗಿ ಕೆಲವು ಊಹಪೋಹಗಳಿಗೆ ಗುರಿಯಾಗಿದ್ದರು. ಅದರೆ ಇದಕ್ಕೆಲ್ಲ ಸ್ವತ ಅವರೇ ಉತ್ತರ ಕೊಡುವುದರೊಂದಿಗೆ ತಮ್ಮ ಮೇಲಿದ್ದ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
ಮೊದಲು ರಾಣಿ ಎಂಬವರನ್ನು ಮದುವೆಯಾಗಿದ್ದ ಮನೋಜ್ ತಿವಾರಿ ಅವರಿಗೆ ವಿಚ್ಛೇದನ ನೀಡಿ ಗಾಯಕಿ ಸುರಭಿ ಅವರನ್ನು ಎರಡನೇ ಮದುವೆಯಾಗಿದ್ದರು. ಇವರಿಗೆ ಮಗು ಕೂಡ ಇದೆ. ಈ ಕುರಿತು ಮಾತಾನಾಡಿರುವ ತಿವಾರಿ, ನಾನು ನನ್ನ ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದರು. ಈಗಲೂ ಸಂಪರ್ಕದಲ್ಲಿದ್ದೇನೆ ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. 10 ವರ್ಷಗಳ ಹಿಂದೆ ನಡೆದ ಘಟನೆಯಿಂದಾಗಿ ಬೇರೆಯಾಗಿದ್ದೇವೆ ಎಂದು ತಿಳಿಸಿದರು.
ಮೊದಲ ಹೆಂಡತಿಯಿಂದ ಬೇರೆಯಾಗಿದ್ದ ನಾನೂ ಒಂಟಿಯಾಗಿದ್ದೆ. ಈ ವೇಳೆ ಗಾಯಕಿ ಸುರಭಿಯ ಪರಿಚಯವಾಗಿತ್ತು. ಸುರಭಿ ನನ್ನ ಮೊದಲ ಹೆಂಡತಿಯ ಮಗಳು ಜಿಯಾಳ ಪರಿಚಯವಿತ್ತು. ಹಾಗಾಗಿ ಜಿಯಾ ಸಲಹೆಯಂತೆ ಸುರಭಿಯನ್ನು ಮದುವೆಯಾಗಿರುವುದಾಗಿ ಹೇಳಿದ್ದಾರೆ. ಸುರಭಿಯ ಬಗ್ಗೆ ಅಭಿಮಾನವಿದ್ದ ಕಾರಣಕ್ಕಾಗಿ ನನ್ನ ಮಗಳು ತಿಳಿಸಿದಂತೆ ಮದುವೆಗೆ ಒಪ್ಪಿದ್ದೇನೆ ಎಂದು ತಮ್ಮ ಸಂಸಾರದ ಗಾಳಿ ಸುದ್ದಿಗೆ ಪೂರ್ಣ ವಿರಾಮ ಹಾಕಿದ್ದಾರೆ.