ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

Public TV
1 Min Read
ST SOMESHAKAR

ಮಂಡ್ಯ: ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲು ಪೂರೈಕೆ ಹಗರಣಕ್ಕೆ ಸಂಬಂಧಿಸಿದಂತೆ 10 ದಿನಗಳಾದ್ರು ಇನ್ನೂ ಏಕೆ ಯಾರನ್ನು ಬಂಧಿಸಿಲ್ಲ? ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ST SOMESHAKAR 1 1 medium

ಮನ್‍ಮುಲ್‍ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣ ಸಂಬಂಧ ಇಂದು ಮನ್‍ಮುಲ್ ಡೈರಿಗೆ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಪ್ರಕರಣದ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿ ನಿಂತಿದ್ದ ಟ್ಯಾಂಕರನ್ನು ವೀಕ್ಷಣೆ ಮಾಡಲು ತೆರಳಿದ್ದರು. ಈ ವೇಳೆ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಸೋಮಶೇಖರ್ ಅವರು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊರೊನಾ ತೊಲಗಲು ಮಾರಮ್ಮ ದೇವಿಗೆ ಕುರಿ, ಕೋಳಿ ಬಲಿ

ST SOMESHAKAR 2 medium

ಪ್ರಕರಣ ಬೆಳಕಿಗೆ ಬಂದು 10 ದಿನ ಕಳೆದದೂ ಸಹ ಇನ್ನೂ ಯಾಕೆ ಒಬ್ಬರನ್ನೂ ನೀವು ಬಂಧಿಸಿಲ್ಲ? ಇಷ್ಟೊತ್ತಿಗೆ ಎಲ್ಲರನ್ನೂ ಬಂಧಿಸಬೇಕಿತ್ತು ಎಂದು ಸಚಿವರು ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಎಎಸ್‍ಪಿ ಇಲ್ಲ ಸರ್ ಒಬ್ಬ ಡ್ರೈವರನ್ನು ಬಂಧಿಸಿದ್ದೇವೆ ಎಂದರು. ಡ್ರೈವರನ್ನು ಅರೆಸ್ಟ್ ಮಾಡೋಕೆ ನೀವೋಬ್ಬರೆ ಆಗಬೇಕಾ? ಬೇರೆಯವರನ್ನು ಬಂಧನ ಮಾಡಲು ನಿಮ್ಮಿಂದ ಆಗಿಲ್ವಾ ಎಂದು ಸೋಮಶೇಖರ್ ಗರಂ ಆದರು. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

ST SOMESHAKAR 3 medium

ಹಾಲಿನ ಟ್ಯಾಂಕರ್ ವಿನ್ಯಾಸವನ್ನು ಎಲ್ಲಿ ಮಾಡಿದ್ದಾರೆ? ಹೇಗೆ ಮಾಡಿದ್ದಾರೆ ಅನ್ನೋದಾದರೂ ತಿಳಿದುಕೊಂಡಿದ್ದೀರಾ ಎಂದು ಮತ್ತೆ ಸಚಿವರು, ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇಲ್ಲ ಸರ್ ಇನ್ನೂ ಸಹ ಅದು ಎಲ್ಲಿ ಮಾಡಿಸಿದ್ದಾರೆ ಎನ್ನೋದೆ ಪತ್ತೆಯಾಗಿಲ್ಲ ಎಂದು ಧನಂಜಯ್ ಹೇಳಿದರು. ಈ ವೇಳೆ ಸೋಮಶೇಖರ್ ಈ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ಚುರುಕುಗೊಳ್ಳಿಸಬೇಕೆಂದು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *