– ಇನಿಯನ ಜೊತೆ ಸೇರಿ 15 ಲಕ್ಷಕ್ಕೆ ಡೀಲ್
– ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಕೊಲೆ
ಬೆಂಗಳೂರು: ಪ್ರಿಯಕರನ ಜೊತೆಗೆ ಸೇರಿ ಗಂಡನಿಗೆ ಸುಪಾರಿ ನೀಡಿ ಪತ್ನಿಯೇ ಕೊಲೆ ಮಾಡಿಸಲು ಯತ್ನಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿಯಾಗಿರುವ ರೂಪ ಮತ್ತು ಗಿರೀಶ್ ಮದುವೆ ಆರು ವರ್ಷಗಳ ಹಿಂದೆ ನಡೆದಿತ್ತು. ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದ ಪತ್ನಿ ರೂಪ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಸೇರಿದ ನಂತರ ರೂಪಾಗೆ ಕುಮಾರ್ ಜೈನ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ನಂತರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮಂಚದ ತನಕ ಹೋಗಿತ್ತು. ಹೀಗಾಗಿ ರೂಪಾಳ ನಡುವಳಿಯಲ್ಲಿ ಕೂಡ ಬದಲಾವಣೆ ಕಾಣಿಸತೊಡಗಿತ್ತು. ಈ ವಿಚಾರ ತಿಳಿದ ರೂಪಾಳ ಗಂಡ ಗಿರೀಶ್ ನೀನು ಇನ್ಮೇಲೆ ಕೆಲಸಕ್ಕೆ ಹೋಗೋದು ಬೇಡ, ಮನೆಯಲ್ಲೇ ಇರು ಅಂತಾ ವಾರ್ನ್ ಮಾಡಿದ್ದಾರೆ.
ಇದರಿಂದ ಬೇಸರಗೊಂಡ ಪತ್ನಿ ರೂಪಾ, ಪ್ರಿಯಕರ ಕುಮಾರ್ ಜೈನ್ ಜೊತೆಗೆ ಸೇರಿ, ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ. ಅದರಂತೆ ಕುಮಾರ್ ಜೈನ್ ಮೂಲಕ ಹದಿನೈದು ಲಕ್ಷಕ್ಕೆ ಗಂಡನ ಕೊಲೆಗೆ ಸುಪಾರಿ ನೀಡಿದ್ದಾನೆ. ಇವರ ಪ್ಲಾನ್ ನಂತೆ ಮೂರು ಲಕ್ಷ ಅಡ್ವಾನ್ಸ್ ಪಡೆದ ನಾಲ್ವರು ಆರೋಪಿಗಳು, ಕೊಲೆಗೆ ಸಿದ್ಧತೆ ನಡೆಸಿ, ಗಿರೀಶ್ ಕೊಲೆ ಮಾಡಲು ಎಲ್ಲರೂ ಮಂಕಿ ಕ್ಯಾಪ್ ಹಾಕಿಕೊಳ್ಳುತ್ತಿದ್ದರು. ಇದೇ ವೇಳೆ ನೈಟ್ ರೌಂಡ್ಸ್ ಬಂದ ಮಾದನಾಯಕನಹಳ್ಳಿ ಪೊಲೀಸರು, ಮಂಕಿ ಕ್ಯಾಪ್ ಗಳನ್ನು ನೋಡಿ ಆರೋಪಿಗಳನ್ನು ಪ್ರಶ್ನಿಸಿದ್ದಾರೆ.
ತಕ್ಷಣ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ವೇಳೆ ಸುಪಾರಿ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪ್ರಮುಖ ಆರೋಪಿ ರೂಪಾ, ಪ್ರಿಯಕರ ಸೇರಿ ಐವರನ್ನು ಪೊಲೀಸರು ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ರ್ಯಾಗಿಂಗ್- ಆರು ಮಂದಿ ಬಂಧನ