ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ 9 ಸರ್ಕಾರಿ ನೌಕರರಿಗೆ ಸೇರಿದ 43 ಸ್ಥಳಗಳಲ್ಲಿ ಒಟ್ಟು 310 ಎಸಿಬಿ ಅಧಿಕಾರಿಗಳಿಂದ 43 ತಂಡಗಳಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭ್ರಷ್ಟ ಅಧಿಕಾರಿಗಳ ಕೋಟಿ ಕೋಟಿ ಆಸ್ತಿಯನ್ನು ಎಸಿಬಿ ತಂಡ ಪತ್ತೆ ಹಚ್ಚಿದೆ.
ದಾಳಿ ವೇಳೆ ಒಬ್ಬರಿಗಿಂತ ಒಬ್ಬರ ಆಸ್ತಿ ಕಮ್ಮಿಯೇನೂ ಇಲ್ಲ. ಎಲ್ಲರೂ ಕೂಡ ಕೋಟಿ, ಕೋಟಿ ಆಸ್ತಿ ಮಾಡಿರೋರೆ. ಯಾರ್ಯಾರ ಮನೆ ಮೇಲೆ ದಾಳಿ ನಡೆಸಿತ್ತು, ಸಿಕ್ಕ ಆಸ್ತಿಪಾಸ್ತಿ ಎಷ್ಟು ಅಂತಾ ನೋಡೋದಾದ್ರೆ.
1. ಜಿ ಶ್ರೀಧರ್- ಕಾರ್ಯ ಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಡಿಸಿ ಕಚೇರಿ ಮಂಗಳೂರು.
ಮೈಸೂರಿನಲ್ಲಿ ಒಂದು ಮನೆ, ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನಲ್ಲಿ ಒಂದು ಮನೆ, ವಿವಿಧ ನಗರಗಳಲ್ಲಿ ನಾಲ್ಕು ಸೈಟ್ ಗಳು, ಬ್ಯಾಂಕ್ ಉಳಿತಾಯ ಖಾತೆ ಡೆಪಾಸಿಟ್ ಇನ್ಶೂರೆನ್ಸ್, ಡೆಪಾಸಿಟ್ ಬಾಂಡ್ ಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನ, ಚಿನ್ನ, ಬೆಳ್ಳಿ ಆಭರಣಗಳು ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ.
2.ಸುರೇಶ್- ಎಇ ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ಉಪ ವಿಭಾಗ ಬಸವ ಕಲ್ಯಾಣ ಬೀದರ್ ಜಿಲ್ಲೆ
ಬಸವ ಕಲ್ಯಾಣದಲ್ಲಿ ಒಂದು ಮನೆ, ಬೀದರ್ ಜಿಲ್ಲೆ ಬಾಲ್ಕಿಯಲ್ಲಿ ಒಂದು ಪೆಟ್ರೋಲ್ ಬಂಕ್, ನಾಲ್ಕು ನಿವೇಶನ, ವಿವಿಧ ಬ್ಯಾಂಕ್ ಗಳಲ್ಲಿ ಎಫ್ಡಿ ಡೆಪಾಸಿಟ್, ಬೆಲೆ ಬಾಳುವ ಚಿನ್ನಾ ಭರಣಗಳು, ಒಂದು ದ್ವಿಚಕ್ರ ವಾಹನ ಪತ್ತೆಯಾಗಿದೆ. ನಿವಾಸದಲ್ಲಿ 15 ಲಕ್ಷ ನಗದು, 750 ಗ್ರಾಂ ಚಿನ್ನ, 3 ನಿವೇಶನಗಳ ಆಸ್ತಿ ಪತ್ರ ಪತ್ತೆಯಾಗಿದೆ. ಜೊತೆಗೆ 10 ಲಕ್ಷ ಎಫ್ಡಿ ಹಾಗೂ 20 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರೋದು ದಾಳಿಯಲ್ಲಿ ಬೆಳಕಿಗೆ ಬಂದಿದೆ
3.ಆರ್.ಪಿ ಕುಲಕರ್ಣಿ ಪ್ರಧಾನ ಇಂಜಿನಿಯರ್ ಮುಖ್ಯ ಯೋಜನಾಧಿಕಾರಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು
ಬೆಂಗಳೂರಲ್ಲಿ ಒಂದು ಮನೆ, ನಾಲ್ಕು ಫ್ಲ್ಯಾಟ್, ವಿವಿಧ ಕಡೆ ಮೂರು ನಿವೇಶನ, ಎರಡು ಕಾರು, ಒಂದು ದ್ವಿಚಕ್ರ ವಾಹನ, ಚಿನ್ನ, ಬೆಳ್ಳಿ ಆಭರಣಗಳು. ಬ್ಯಾಂಕ್ ಖಾತೆಗಳಲ್ಲಿ ಠೇವಣಿಗಳು, ಬೆಲೆ ಬಾಳುಗ ಗೃಹಪಯೋಗಿ ವಸ್ತುಗಳು ಪತ್ತೆಯಾಗಿದೆ.
4.ಎ. ಕೃಷ್ಣಮೂರ್ತಿ ಹಿರಿಯ ಮೋಟಾರು ವಾಹನ ನಿರೀಕ್ಷಕರು ಕೋರಮಂಗಲ ಆರ್ ಟಿಓ ಕಚೇರಿ ಬೆಂಗಳೂರು
ಬೆಂಗಳೂರಿನ ಹಂಪಿ ನಗರದಲ್ಲಿ ಒಂದು ಮನೆ, ದೊಮ್ಮಲೂರಲ್ಲಿ ಒಂದುಮನೆ, ಬೆಂಗಳೂರಲ್ಲಿ ಒಂದು ಶಾಲಾ ಕಟ್ಟಡ, ತುಮಕೂರು ಕೊರಟಗೆರೆಯಲ್ಲಿ ಫಾರ್ಮ್ ಹೌಸ್ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ 30 ಸೈಟ್ ಗಳಿವೆ. ಚಿನ್ನ, ಬೆಳ್ಳಿ ಆಭರಣಗಳು, ವಿವಿಧ ಕಡೆಗಳಲ್ಲಿ 82 ಎಕರೆ ಕೃಷಿ ಜಮೀನು, ನಾಲ್ಕು ದ್ವಿಚಕ್ರ ವಾಹನ, ಮೂರು ಕಾರುಗಳು, ಒಂದು ಟೆಂಪೋ ಮ್ಯಾಕ್ಸ್ ಕ್ಯಾಬ್, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು.
5.ಕೃಷ್ಟ ಎಸ್ ಹೆಬ್ಬೂರು- ಕಾರ್ಯ ನಿರ್ವಾಹಕ ಅಭಿಯಂತರ ಕೆಆರ್.ಐಡಿ.ಎಲ್ ಉಡುಪಿ ಜಿಲ್ಲೆ
ಉಡುಪಿಯಲ್ಲಿ ಒಂದು ಮನೆ, ಬೆಂಗಳೂರು ನಗರ ಜಿಗಣಿಯಲ್ಲಿ ಒಂದು ಮನೆ, ಹುಬ್ಬಳ್ಳಿಯಲ್ಲಿ ಒಂದು ಮನೆ, ಉಡುಪಿ ಜಿಲ್ಲೆ ಶಿವಳ್ಳಿ ಗ್ರಾಮದಲ್ಲಿ 15.66 ಸೆಂಟ್ಸ್ ನಿವೇಶನ ಎರಡು ದ್ವಿಚಕ್ರ ವಾಹನ, ಒಂದು ಕಾರು, ಚಿನ್ನ, ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು,
ಇದನ್ನೂ ಓದಿ: ಮಂಗಳೂರಿನಲ್ಲಿ ಯೂನಿಸೆಕ್ಸ್ ಸೆಲೂನ್ಗೆ ನುಗ್ಗಿ ಮಹಿಳೆಗೆ ಕಿರುಕುಳ
6.ಟಿ. ವೆಂಕಟೇಶ್- ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ, ಮಂಡ್ಯ ಜಿಲ್ಲೆ
ಮೈಸೂರು ನಗರದಲ್ಲಿ ಎರಡು ಮನೆ, ವಿವಿಧ ನಗರಗಳಲ್ಲಿ 9 ನಿವೇಶನ, 12 ಎಕರೆ ಕೃಷಿ ಜಮೀನು, ಒಂದು ಕಾರು, ಮೂರು ದ್ವಿಚಕ್ರ ವಾಹನ, ಚಿನ್ನ, ಬೆಳ್ಳಿ ಆಭರಣಗಳು, ನಗದು ಹಣ, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು.
7.ಹೆಚ್.ಆರ್ ಕೃಷ್ಣಮೂರ್ತಿ- ಸಹಾಯಕ ನಿರ್ದೇಶಕರು ಮಾಲೂರು ಟೌನ್ ಪ್ಲ್ಯಾನಿಂಗ್ ಅಥಾರಿಟಿ ಮಾಲೂರು ಕೋಲಾರಜಿಲ್ಲೆ
ಬೆಂಗಳೂರು ಶಿವಮೊಗ್ಗ, ದಾವಣಗೆರೆಯಲ್ಲಿ ತಲಾ ಒಂದೊಂದು ಮನೆ, ವಿವಿಧ ಪ್ರಮುಖ ನಗರಗಳಲ್ಲಿ ನಾಲ್ಕು ನಿವೇಶನ, ಚನ್ನಗಿರಿಯಲ್ಲಿ 15 ಎಕರೆ 15 ಗುಂಟೆ ಕೃಷಿ ಜಮೀನು, ಎರಡು ದ್ವಿಚಕ್ರ ವಾಹನ, ಒಂದು ಕಾರು, ಚಿನ್ನ, ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು
ಇದನ್ನೂ ಓದಿ: ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಮಾದಲ್ಲಿಯೂ ಇಲ್ಲ: ಗೋಪಾಲ್ ರಾಜ್
8.ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಎಇಇ ಒನ್ 10 ಕೆವಿ ನೋಡೆಲ್ ಅಧಿಕಾರಿ ಕೆಪಿಟಿಸಿಎಲ್, ಪ್ರಭಾರಿ ಇಇ- ವಿಜಯಪುರ
ವಿಜಯಪುರದಲ್ಲಿ ಮೂರು ವಾಸದ ಮನೆ, ವಿವಿಧ ಕಡೆಗಳಲ್ಲಿ ನಾಲ್ಕು ನಿವೇಶನ, 35 ಎಕರೆ ಕೃಷಿ ಜಮೀನು, ಒಂದು ಕಾರು ಎರಡು ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು.
9.ಎ.ಎನ್ ವಿಜಯ್ ಕುಮಾರ್- ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್, ಜೆಸ್ಕಾಂ ಬಳ್ಳಾರಿ
ಬೆಂಗಳೂರು, ಬಳ್ಳಾರಿಯಲ್ಲಿ ತಲಾ ಒಂದರಂತೆ ಒಂದೊಂದು ಮನೆ, ವಿವಿಧ ನಗರಗಳಲ್ಲಿ ಒಟ್ಟು ಎಂಟು ನಿವೇಶನ, ಎರಡು ಕಾರು, ಒಂದು ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ವಸ್ತುಗಳು ಪತ್ತೆಯಾಗಿವೆ.