ಶಿವಮೊಗ್ಗ: ಬಹಳ ಜೋರಾಗಿ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯ ಜನ ಭಯಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.
ನಗರವನ್ನೇ ಬೆಚ್ಚಿ ಬೀಳಿಸುವಂತೆ ಶಬ್ಧ ಕೇಳಿ ಬಂದಿದ್ದು ಜನರೆಲ್ಲ ಮನೆಯಿಂದ ಹೊರಗೆ ಬಂದು ಜಮಾಯಿಸಿದ್ದಾರೆ. ಭಾರಿ ಶಬ್ದಕ್ಕೆ ಏನು ಕಾರಣ ಎಂಬುದೇ ಗೊಂದಲವಾಗಿದೆ.
ಕೊಪ್ಪ, ಎನ್.ಆರ್.ಪುರ, ತರೀಕೆರೆ ತಾಲೂಕಿನ ಸುತ್ತಮುತ್ತಲು ಶಬ್ಧ ಕೇಳಿಸಿದೆ. ರಾತ್ರಿ 10.21 ರಿಂದ 10.23ರವರೆಗೆ ಭಾರೀ ಶಬ್ಧ ಬಂದಿದೆ. ಭೂಮಿಯೊಳಗಿಂದ ಬಾಂಬ್ ಬ್ಲಾಸ್ಟ್ ಆದಂತೆ ಶಬ್ಧ ಬಂದಿದೆ ಎಂದು ಜನ ಹೇಳುತ್ತಿದ್ದಾರೆ.