-ಮದ್ವೆಗಾಗಿ ತೆರೆದ ಸೇತುವೆ
ನವದೆಹಲಿ: ಭಾರತ ಮತ್ತು ನೇಪಾಳದ ಗಡಿಯಲ್ಲೊಂದು ವಿಶೇಷ ಮದುವೆ ನಡೆದಿದೆ. ಈ ಮದುವೆಗಾಗಿ ಎರಡೂ ದೇಶಗಳ ನಡುವಿನ ಸೇತುವೆಯನ್ನು ತೆರೆಯಲಾಗಿದ್ದು, 15 ನಿಮಿಷದಲ್ಲಿ ವಿವಾಹ ನೆರವೇರಿದೆ.
ಉತ್ತರಾಖಂಡ ಪಿಥೌರಾಗಢ ನಿವಾಸಿ ಕಮಲೇಶ್ ಮತ್ತು ನೇಪಾಳದ ದಾರ್ಚುಲಾದ ರಾಧಿಕಾ ಸಾಂಸರಿಕ ಜೀವನಕ್ಕೆ ಕಾಲಿಟ್ಟ ನವ ದಂಪತಿ. ಇಬ್ಬರ ಮದುವೆ ಮಾರ್ಚ್ 22ರಂದು ನಿಗದಿಯಾಗಿತ್ತು. ಆದ್ರೆ ಕೊರೊನಾ ಮಾಹಾಮಾರಿಯಿಂದ ಮದುವೆ ದಿನಾಂಕವನ್ನು ಎರಡೂ ಕುಟುಂಬಗಳು ಮುಂದೂಡುತ್ತಾ ಬಂದಿದ್ದವು.
ಮದುವೆ ಮುಂದೂಡುತ್ತಾ ಬಂದಾಗ ಯುವಕ ಮತ್ತು ಯುವತಿ ಗಡಿಯಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದರು. ಈ ಸಂಬಂಧ ಇಂಡೋ-ನೇಪಾಳ ಗಡಿಯಿಂದ ಅನುಮತಿಯೂ ಜೋಡಿಗೆ ಸಿಕ್ಕಿತ್ತು. 15 ನಿಮಿಷದಲ್ಲಿ ಮದುವೆ ಕಾರ್ಯಗಳು ನಡೆಯಬೇಕು ಎಂದು ನೇಪಾಳಕ್ಕೆ ವರ, ವರನ ತಂದೆ ಮತ್ತು ಇಬ್ಬರು ಸಂಬಂಧಿಕರಿಗೆ ಕಳುಹಿಸಲಾಗಿತ್ತು. ಸೇನೆಯ ಷರತ್ತುಗಳಂತೆ ಮದುವೆ ಮಾಡಿಕೊಂಡು ವಧುವನ್ನು ಭಾರತಕ್ಕೆ ಕರೆ ತರಲಾಗಿದೆ.