ಭದ್ರಾ ಕಾಲುವೆಗೆ ಬಿದ್ದ ಬೊಲೆರೋ – ಪತಿ ಪಾರು, ಪತ್ನಿ ನೀರುಪಾಲು

Public TV
1 Min Read
CKM 9

ಚಿಕ್ಕಮಗಳೂರು: ಭದ್ರಾ ಕಾಲುವೆಗೆ ಬೊಲೆರೋ ಕಾರೊಂದು ಬಿದ್ದಿದ್ದು, ಘಟನೆಯಲ್ಲಿ ಪತಿ ಅಪಾಯದಿಂದ ಪಾರಾದ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ನಡೆದಿದೆ.

ಲಕ್ಕವಳ್ಳಿಯ ಸೋಂಪುರ ನಿವಾಸಿಗಳಾದ ಸಂತೋಷ್ ಜೈನ್ (32) ಹಾಗೂ ಅವರ ಪತ್ನಿ ಸರ್ವಮಂಗಳ (29) ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ಬೊಲೆರೋ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ ಎಂದು ಚಾಲಕ ಸಂತೋಷ್ ಹೇಳುತ್ತಿದ್ದಾರೆ.

CKM 1 1

ಬೊಲೆರೋ ನೀರಿಗೆ ಬೀಳುತ್ತಿದ್ದಂತೆಯೇ ಸ್ಥಳೀಯರು ಗಮನಿಸಿ ಕೂಡಲೇ ಸಂತೋಷ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಪತ್ನಿ ಸರ್ವಮಂಗಳ (29)ನೀರುಪಾಲು ಆಗಿದ್ದು, ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ.

CKM 1 3

ಭದ್ರಾ ಕಾಲುವೆ 30 ಅಡಿ ಆಳ ಇದ್ದು, ಸದ್ಯ ಬೊಲೆರೋ ಕಾರು ಹಾಗೂ ಮೃತದೇಹಕ್ಕಾಗಿ ಸುಮಾರು 10-15 ನೀರು ಕಡಿಮೆ ಮಾಡಿದ್ದಾರೆ. ನೀರಿನಲ್ಲಿದ್ದ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತಾದರೂ ಚೈನ್ ಕಟ್ ಆಗಿ ಕಾರು ವಾಪಸ್ ನಿರಿಗೆ ಬಿದ್ದಿದ್ದು, ಸದ್ಯ ಅದನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿತ್ತು.

CKM 1 2

ಸ್ಥಳದಲ್ಲಿ ಸ್ಥಳೀಯರು ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನೆರೆದಿದ್ದು, ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ. ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *