ಬಿಗ್ ಬಾಸ್ನ ವೀಕೆಂಡ್ ಎಪಿಸೋಡ್ಗಳಲ್ಲಿ ಸುದೀಪ್ ಭಾಗವಹಿಸುತ್ತಿಲ್ಲ. ಅನಾರೋಗ್ಯದ ಕಾರಣ ಅವರು ವೀಕೆಂಡ್ ಪಂಚಾಯಿತಿಗೆ ಹಾಜರಾಗಿಲ್ಲ. ಇದರಿಂದ ವೀಕ್ಷಕರಿಗಿಂತ ಹೆಚ್ಚು ಮನೆ ಮಂದಿಗೆ ಬೇಸರವಾಗಿದೆ. ಹೀಗಿರುವಾಗಲೇ ವಾಯ್ಸ್ ನೋಟ್ ಮೂಲಕ ಕಿಚ್ಚ ಸ್ಪರ್ಧಿಗಳಿಗೆ ಸರ್ಪೈಸ್ ಹಾಗೂ ಶಾಕ್ ನೀಡಿದ್ದಾರೆ. ಸ್ಪರ್ಧಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ವೀಕ್ನೆಸ್ ಬಗ್ಗೆ ಸಹ ತಿಳಿಸಿದ್ದಾರೆ.
ಎಲ್ಲ ಸ್ಪರ್ಧಿಗಳ ಬಗ್ಗೆ ಕಿಚ್ಚ ಮಾತನಾಡಿದ್ದು, ಮನೆಯ ಬುದ್ಧಿವಂತರೆಂದೇ ಕರೆಸಿಕೊಳ್ಳುವ ಚಕ್ರವರ್ತಿ ಅವರ ಬಗ್ಗೆ ಸಹ ಹೇಳಿದ್ದಾರೆ. ಚಕ್ರವರ್ತಿಯವರು ನಂತರದಲ್ಲಿ ಈ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ. ತುಂಬಾ ತಿಳುವಳಿಕೆ ಇರುವವರು ನೀವು, ಆದರೂ ಒಂದು ಕಿವಿ ಮಾತು, ನಿಮ್ಮ ಮಾತು ಹಾಗೂ ತಿಳುವಳಿಕೆ ನಿಜವಾಗಿಯೂ ಚೆನ್ನಾಗಿದೆ. ಕೆಲವು ಸಲ ಬುದ್ಧಿ ಹೆಚ್ಚಾದಾಗಲೂ ಲೈಫ್ ದಾರಿ ತಪ್ಪಬಹುದು ಎನ್ನುವುದು ಗೊತ್ತಿರಲಿ ಎಂದು ಸುದೀಪ್ ಎಚ್ಚರಿಸಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿ ಚಕ್ರವರ್ತಿ, ಥ್ಯಾಂಕ್ಯೂ ಸರ್ ಅಳವಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇಷ್ಟಾದ ಬಳಿಕ ಮನೆಯಲ್ಲಿನ ತಮ್ಮ ಸ್ನೇಹಿತ ಪ್ರಶಾಂತ್ ಸಂಬರಿಗಿಯವರೊಂದಿಗೆ ಮಾತನಾಡುವ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಸರ್ ತಿದ್ದಿಕೊಳ್ಳುವೆ ಎನ್ನುವುದರ ಜೊತೆಗೆ ಬೈದ್ರೋ ಮೆಟ್ಟಲ್ಲಿ ಹೊಡೆದರೋ ಕನ್ಫ್ಯೂಶನ್ ಆಯ್ತು, ಒಂದು ಕಡೆಯಿಂದ ಕ್ಲಿಯರ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಎಲ್ಲರಿಗೂ ಎರಡು ಲೈನ್ ಹೊಗಳಿಕೆ, ಎರಡು ಲೈನ್ ಒದೆ. ನನಗೆ ಮಾತ್ರ ಪರ್ಫೆಕ್ಟ್ ಆಗಿ ಹೇಳಿದರು ಎಂದು ಸಂಬರಗಿ ಜೊತೆ ಮಾತನಾಡಿಕೊಂಡಿದ್ದಾರೆ.
ಹೀಗೆ ಸುದೀಪ್ ಅವರು ಮನೆಯವರೆಲ್ಲರನ್ನೂ ಸುದೀಪ್ ಹೊಗಳುವುದರ ಜೊತೆಗೆ ಅವರ ವೀಕ್ನೆಸ್ ಬಗ್ಗೆ ಸಹ ತಿಳಿಸಿದ್ದಾರೆ. ಪ್ರಶಾಂತ್ ಸಂಬರಗಿ ಬಗ್ಗೆ ಸಹ ಮಾತನಾಡಿರುವ ಕಿಚ್ಚ, ಅಳೋ ಮಗುಗೆ ಹಾಲು ಜಾಸ್ತಿ ಸಿಗುತ್ತೆ, ಹಾಗಂತ ಅಳೋದು ಜಾಸ್ತಿ ಆದರೆ, ನೋಡುವವರಿಗೆ ಎರಡು ತಟ್ಟೋಣ ಅನ್ಸುತ್ತೆ ಎಂದು ಹೇಳುವ ಮೂಲಕ ಪ್ರಶಾಂತ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಚಾಟಿ ಬೀಸಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಸಂಬರಗಿ ಜಾಸ್ತಿ ಮಾಡಿಲ್ಲ ಸರ್, ಜಾಸ್ತಿ ಆಗಿದ್ರೆ ಸರಿಪಡಿಸಿಕೊಳ್ಳುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.