– ಬರ್ಬರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
– ಸಿನಿಮಾ ರೀತಿ ಕೊಲೆಗೈದ ಬಾಲಕರು
ನವದೆಹಲಿ: ಬೈಕ್ ಸ್ಟಂಟ್ ಮಾಡಲು ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯನ್ನು ಮೂವರು ಅಪ್ರಾಪ್ತ ಬಾಲಕರು ನಡುಬೀದಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯ ರಘುಬೀರ್ ನಗರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 25 ವರ್ಷದ ಮನೀಶ್ ಜಗ್ಗಿ ಎಂದು ಗುರುತಿಸಲಾಗಿದೆ. ಮನೀಶ್ ವಾಸವಿದ್ದ ಏರಿಯಾದಲ್ಲಿ ದಿನ ಮೂವರು ಅಪ್ರಾಪ್ತ ಬಾಲಕರು ಬೈಕ್ ರೈಸ್ ಮಾಡುವುದು ಮತ್ತು ಜನರು ಓಡಾಡುವ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೊಂಡು ಮನೀಶ್ ಇಲ್ಲಿ ಬೈಕ್ ರೇಸ್ ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ.
ಮನೀಶ್ ಬೈಕ್ ಸ್ಟಂಟ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ಅಪ್ರಾಪ್ತರು ಆತನ ಮೇಲೆ ಜಗಳಕ್ಕೆ ನಿಂತಿದ್ದಾರೆ. ಈ ಜಗಳ ವಿಕೋಪಕ್ಕೆ ಹೋಗಿ, ಮೂವರು ಬಾಲಕರು ನಡುರಸ್ತೆಯಲ್ಲಿ ಆತನನ್ನು ಕೊಂದು ಹಾಕಿದ್ದಾರೆ. ಬಾಲಕರು ನಡುರಸ್ತೆಯಲ್ಲಿ ಆತನ್ನು ಎಳೆದಾಡಿಕೊಂಡು ಮರ್ಡರ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿನಿಮಾ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಚಾಕುವಿನಿಂದ 28 ಬಾರಿ ಇರಿದು ಮನೀಶ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
दिल्ली के रघुवीर नगर इलाके का ये हत्या का #CCTV फुटेज है। एक शख्स को सरेआम तीन से चार लड़के चाकुओं से गोद रहे है। और भीड़ तमाशबीन बनी हुई है। .. @DelhiPolice @IPSMSRandhawa @DCPWestDelhi @CPDelhi pic.twitter.com/pkVFj9N4PJ
— Ravi Jalhotra (@ravijalhotra) July 13, 2020
ಈ ಘಟನೆಯಲ್ಲಿ ಇನ್ನೊಂದು ಶಾಂಕಿಂಗ್ ಸಂಗತಿ ಎಂದರೆ, ಮನೀಶ್ ಕೊಲೆಯಾಗುವ ವೇಳೆ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿದ್ದರು. ಆದರೆ ಯಾರೂ ಕೂಡ ಮನೀಶ್ ಸಹಾಯಕ್ಕೆ ಬಂದಿಲ್ಲ. ವಾಹನ ಸವಾರರು, ದಾರಿಹೋಕರು ಎಲ್ಲರೂ ಮನೀಶ್ ಸಾಯುವುದನ್ನು ನೋಡುತ್ತಾ ಮುಂದೆ ಹೋಗಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ಮನೀಶ್ನನ್ನು ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ. ಆದರೆ ಆತ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.