ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಆಸ್ಪತ್ರೆಗಳು ಸಜ್ಜಾಗಿಲ್ಲ ಎನ್ನುವ ಆರೋಪವಿದೆ. ವಿಚಿತ್ರವೆಂದರೆ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಸ್ಮಶಾನಗಳು ಸಜ್ಜಾಗಿದೆ. ಹೌದು ಮೃತ ಸೋಂಕಿನ ಶವ ಸುಡಲು ಹೊಸ ತಂತ್ರಜ್ಞಾನದತ್ತ ಚಿಂತನೆ ನಡೆಯುತ್ತಿದೆ.
ಬೆಂಗಳೂರಿನ ಕೋವಿಡ್-19 ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಐಸಿಯು ಖಾಲಿ ಇಲ್ಲ. ಆದರೆ ಮೃತ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಮಹಾ ಪ್ಲ್ಯಾನ್ ಸಿದ್ಧವಾಗಿದೆ. ಹೌದು, ಕೊರೊನಾ ಪಾಸಿಟಿವ್ ಮೃತದೇಹ ಬಂದರೆ ನಿಗದಿತ ಸ್ಮಶಾನಕ್ಕೆ ಶಿಫ್ಟ್ ಮಾಡಲಾಗುತ್ತದೆ.
ಹೆಬ್ಬಾಳ, ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಮಾತ್ರ ಕೋವಿಡ್-19ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲಾಗುವುದು. ಸದ್ಯ ವಿದ್ಯುತ್ ಚಿತಾಗಾರದಲ್ಲಿ ಹೆಣ ಸುಡಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಆದರೆ ಕೋವಿಡ್-19 ರೋಗಿಯ ಮೃತದೇಹ ಸುಡಲು ಕಡಿಮೆ ಸಮಯ ಪಡೆಯುವ ತಂತ್ರಜ್ಞಾನದತ್ತ ಚಿಂತನೆ ನಡೆದಿದೆ.