ಬೆಳಗಾವಿ: ಬಿಜೆಪಿ ಸರ್ಕಾರ ಬಂದ ಮೇಲೆ ಬೆಂಗಳೂರು, ವಿಧಾನಸೌಧ, ಕೃಷ್ಣಾ ಬಿಟ್ಟು ಎಲ್ಲೂ ಬರಲಿಲ್ಲ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ಬೆಳಗಾವಿ ಭಾಗದಲ್ಲಿನ ಜನರಿಗೆ ಪರಿಹಾರ ಕೊಡೊಕೆ ಆಗಲಿಲ್ಲ. ಕಳೆದ ವರ್ಷ ಬೆಳಗಾವಿಯಲ್ಲಿ ಅಧಿವೇಶನ ಕರೆಯತ್ತೇವೆ ಎಂದಿದ್ದರು. ರಾಜಕಾರಣ ಮತ್ತು ಪಕ್ಷ ಬಿಟ್ಟರೆ ರಾಜ್ಯದ ಜನರಿಗೆ ನ್ಯಾಯ ಕೊಡಬೇಕು ಅಂತೆನಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆದ್ದಾರೆ.
ಜನರ ಸೇವೆ ಮಾಡುವುದು ಬಿಜೆಪಿಯವರ ಉದ್ದೇಶ ಅಲ್ಲ. ಬೆಳಗಾವಿಯಲ್ಲಿ ಅಧಿವೇಶನ ಮಾಡದಿದ್ದರೆ ಯಾಕೆ ಅಧಿಕಾರದಲ್ಲಿರಬೇಕು. ಅನ್ಯಾಯ ಆಗುತ್ತೆ ಅಂತಿದ್ದ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರ ಪಾರ್ಟಿ ಅಭಿಪ್ರಾಯ ನಾವೇಕೆ ಮಾತಾಡಬೇಕು. ಅವರವರ ಚಿಂತನೆ, ಪಕ್ಷಗಳನ್ನು ಒಟ್ಟಾಗಿ ಸೇರಿಸಿ ತೀರ್ಮಾನ ಮಾಡಿದ್ದೇವು ಎಂದು ಹೇಳಿದರು.