ಬೆಂಗಳೂರು: ಕೊರೊನಾ 2ನೇ ಅಲೆ ಸ್ಫೋಟ ಹಿನ್ನೆಲೆಯಲ್ಲಿ ಈ ಬಾರಿಯೂ ಬೆಂಗಳೂರು ಕರಗ ಉತ್ಸವಕ್ಕೆ ಬ್ರೇಕ್ ಹಾಕಲಾಗ್ತಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ರಂಜಾನ್ ಹಾಗೂ ಬೆಂಗಳೂರು ಕರಗ ಆಚರಣೆ ಯಾವುದಕ್ಕೂ ಬಿಡಲ್ಲ. ಕೊರೊನಾಗೆ ಇದ್ಯಾವುದೂ ಗೊತ್ತಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಹೋಲಿ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋಟೆಲ್ ಗಳಲ್ಲಿ, ಪೂಲ್ ಪಾರ್ಟಿಗಳಲ್ಲಿ ನಿಯಮ ಪಾಲನೆ ಆಗಲೇಬೇಕು. ಆರೋಗ್ಯ ಇಲಾಖೆ ಮೂಲಕ ಸಿಎಂಗೆ ಕಡತ ಹೋಗಿದೆ. ಹೋಲಿ ನಿರ್ಬಂಧನಾ ಅಥವಾ ಆಚರಣೆನಾ ಅಂತ ಸಿಎಂ ತೀರ್ಮಾನ ಮಾಡ್ತಾರೆ ಎಂದರು.
ತಜ್ಞರ ಸಲಹೆಗಳಿಗೆ ಸರ್ಕಾರ ಮನ್ನಣೆ ನೀಡದ ವಿಚಾರದ ಕುರಿತು ಮಾತನಾಡಿ, ಮಾ. 19 ರಂದು ನೀಡಿದ್ದ ಸಲಹೆಗಳು ಮೂಲೆ ಗುಂಪಾಗಿವೆ. ಜನರ, ಸಮುದಾಯಗಳ ಮಾತು ಕೇಳಬೇಕಿದೆ. ಹೀಗಾಗಿ ಹಂತ ಹಂತವಾಗಿ ಎಲ್ಲ ಜಾರಿ ಆಗಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯಕ್ಕಂತೂ ಜನರ ಆರೋಗ್ಯ ಮುಖ್ಯ. ನನ್ನ ವಿರುದ್ಧದ ಪ್ರತಿಭಟನೆಗೆ ನಾನೇನು ಮಾತನಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಸೀಲ್ ಕಡ್ಡಾಯ: ಸುಧಾಕರ್