– 115 ಮಂದಿ ಬಲಿ, 568 ಮಂದಿ ಐಸಿಯುನಲ್ಲಿ
– ಒಟ್ಟು ಸೋಂಕಿತರ ಸಂಖ್ಯೆ 55,115ಕ್ಕೆ ಏರಿಕೆ
ಬೆಂಗಳೂರು: ಇಂದು ರಾಜ್ಯದಲ್ಲಿ ಒಟ್ಟು 3,693 ಮಂದಿಗೆ ಸೋಂಕು ಬಂದಿದ್ದು, 115 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1,028 ಮಂದಿ ಬಿಡುಗಡೆಯಾಗಿದ್ದಾರೆ.
ಈ ಪೈಕಿ ಬೆಂಗಳೂರಿನಲ್ಲಿ 2,208 ಮಂದಿಗೆ ಬಂದಿದ್ದರೆ, 75 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕರ್ನಾಟದಲ್ಲಿ ಒಟ್ಟು 55,115 ಮಂದಿಗೆ ಮಂದಿಗೆ ಸೋಂಕು ಬಂದಿದ್ದು, ಈ ಪೈಕಿ 33,205 ಸಕ್ರಿಯ ಪ್ರಕರಣಗಳಿದ್ದರೆ 20,757 ಮಂದಿ ಬಿಡುಗಡೆಯಾಗಿದ್ದಾರೆ.
ಇಂದಿನ 115 ಮಂದಿ ಸೇರಿದಂತೆ ಒಟ್ಟು 1,147 ಮಂದಿ ಮೃತಪಟ್ಟಿದ್ದಾರೆ. ಒಟ್ಟು 568 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 2,208, ಧಾರವಾಡ 157, ಬಳ್ಳಾರಿ 157, ವಿಜಯಪುರ 118, ಬೆಳಗಾವಿ 95, ಮೈಸೂರು 93, ಕಲಬುರಗಿ 89, ಉಡುಪಿ 80, ಉತ್ತರ ಕನ್ನಡ 75, ಬೀದರ್ 69 ಮಂದಿಗೆ ಸೋಂಕು ಬಂದಿದೆ.
ಎಲ್ಲಿ ಎಷ್ಟು ಮಂದಿ ಬಲಿ?
ಬೆಂಗಳೂರು 75, ಧಾರವಾಡ 8, ಬಳ್ಳಾರಿ 3, ಬೆಳಗಾವಿ 4, ಮೈಸೂಋಉ 7, ಉಡುಪಿ 3, ಉತ್ತರ ಕನ್ನಡ 2,ದಾವಣಗೆರೆ 2, ಮಂಡ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಐಸಿಯುನಲ್ಲಿ ಎಷ್ಟು ಮಂದಿ?
ಒಟ್ಟು 568 ಮಂದಿ ಐಸಿಯುನಲ್ಲಿದ್ದು, ಬೆಂಗಳೂರು 333, ಕಲಬುರಗಿ 33, ಧಾರವಾಡ 24, ರಾಯಚೂರು 17, ಬಳ್ಳಾರಿ 16, ಮಂಡ್ಯ 16, ಹಾಸನ 15, ತುಮಕೂರು 14, ಮೈಸೂರು 12, ಬೀದರ್11, ಕೊಪ್ಪಳ 10 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆತುತ್ತಿದ್ದಾರೆ.