ಬಿಜೆಪಿ ನಾಯಕಿ ಖುಷ್ಬೂ ಬಂಧನ

Public TV
3 Min Read
Kushbu Sundar 2

ಚೆನ್ನೈ: ತಮಿಳುನಾಡಿನ ಚಿದಂಬಂರಂಗೆ ತೆರಳುತ್ತಿದ್ದ ವೇಳೆ ಬಿಜೆಪಿ ನಾಯಕಿ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಸಿಕೆ ಪಕ್ಷದ ನಾಯಕ, ಸಂಸದ ತಿರುಮವಾಲವನ್ ಅವರು ಮನುಸ್ಮೃತಿಯ ಬಗ್ಗೆ ಹೇಳಿದ್ದನ್ನು ವಿರೋಧಿಸಿ ಅವರು ಚಿದಂಬರಂಗೆ ತೆರಳುತ್ತಿದ್ದರು. ಸಂಸದ ಅವರ ಹೇಳಿಕೆಯನ್ನು ಖಂಡಿಸಿ ಚಿದಂಬರಂ ನಲ್ಲಿರುವ ಸಂಸದರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಖುಷ್ಬೂ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಖುಷ್ಬೂ ಅವರು, ನಮ್ಮನ್ನು ಬಂಧಿಸಿ ಪೊಲೀಸ್ ವ್ಯಾನ್‍ನಲ್ಲಿ ಕರೆದೊಯ್ಯಲಾಗಿದೆ. ಮಹಿಳೆಯರ ಘಟತೆಗಾಗಿ ನಾವು ನಮ್ಮ ಕೊನೆಯ ಉಸಿರಿನವರೆಗೂ ಹೋರಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ನಾವೂ ಕೂಡ ಅದೇ ಹಾದಿಯಲ್ಲಿ ನಡೆಯುತ್ತೇವೆ. ದೌರ್ಜನ್ಯಕ್ಕೆ ಎಂದು ನಾವು ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.

ವಿಡುತಲೈ ಚಿರುಥೈಗಲ್ ಕಡ್ಚಿ ಪಕ್ಷದ ನಾಯಕರು ಹಾಗೂ ಸಂಸದರಾಗಿರುವ ತಿರುಮವಾಲವನ್ ಅವರ ಮಹಿಳೆರಿಗೆ ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಖಷ್ಬೂ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಆದಾಗಲೇ ಪ್ರತಿಭಟನೆ ಆರಂಭ ಮಾಡಿದ್ದರು. ಇತ್ತ ಖುಷ್ಬೂ ಅವರು ಕೂಡ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ ಕಾರಣ ಸುಮಾರು 16 ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಸದ ತಿರುಮವಾಲವನ್ ಅವರು ಹಿಂದೂ ಧರ್ಮ ಹಾಗೂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ವೈರಲ್ ಆಗಿತ್ತು. ಇದಾದ ಬಳಿಕ ಹಲವು ಹಿಂದೂ ಪರ ಸಂಘಟನೆಗಳು ಸಂಸದರ ಹೇಳಿಕೆಯನ್ನು ಖಂಡಿಸಿದ್ದರು. ಖುಷ್ಬೂ ಅವರು ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಸನಾತನ ಹಿಂದೂ ಧರ್ಮ ಹಾಗೂ ಮನುಸ್ಮೃತಿ ಮಹಿಳೆಯರನ್ನು ವೈಶ್ಯೆ ಎಂದು ಕರೆಯುತ್ತದೆ. ಅಲ್ಲದೇ ಪುರುಷರಿಗಿಂತ ಕೀಳಾಗಿ ನೋಡಲಾಗುತ್ತದೆ ಎಂದು ಸಂಸದರು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *