ಬೆಂಗಳೂರು: ಇವತ್ತು ಸಿಎಂ ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿಗೆ ಬಿಗ್ ಡೇ ಆಗಿದ್ದು 30ಕ್ಕೂ ಹೆಚ್ಚು ಶಾಸಕರ ಬಳಿ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರ, ಯಡಿಯೂರಪ್ಪ ವಿರೋಧಿ ಮತ್ತು ತಟಸ್ಥ ಬಣಗಳಿವೆ. ಈ ಪೈಕಿ ಯಡಿಯೂರಪ್ಪ ಪರ ಶಾಸಕರ ಸಂಖ್ಯೆ ಹೆಚ್ಚಿದೆ. 30ಕ್ಕೂ ಶಾಸಕರು ಅಭಿಪ್ರಾಯ ಸಂಗ್ರಹಕ್ಕೆ ಹೆಸರು ನೋಂದಣಿ ಮಾಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಿಗೆ ಕರೆ ಮಾಡಿ ತಮ್ಮ ಹೆಸರನ್ನು ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಸಿಎಂ ಬಿಎಸ್ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್
ಬಿಎಸ್ವೈ ಪರ ಯಾರು?
ರೇಣುಕಾಚಾರ್ಯ(ಹೊನ್ನಾಳಿ, ದಾವಣಗೆರೆ), ಎ.ಎಸ್. ಪಾಟೀಲ್ ನಡಹಳ್ಳಿ (ಮುದ್ದೇಬಿಹಾಳ, ವಿಜಯಪುರ), ಮಾಡಾಳ್ ವಿರೂಪಾಕ್ಷಪ್ಪ(ಚನ್ನಗಿರಿ, ದಾವಣಗೆರೆ), ರಾಜುಗೌಡ(ಸುರಪುರ, ಯಾದಗಿರಿ), ಪ್ರೀತಂ ಗೌಡ(ಹಾಸನ ನಗರ, ಹಾಸನ), ಬೆಳ್ಳಿ ಪ್ರಕಾಶ್(ಕಡೂರು, ಚಿಕ್ಕಮಗಳೂರು), ಹರತಾಳು ಹಾಲಪ್ಪ(ಸಾಗರ, ಶಿವಮೊಗ್ಗ), ಸಿದ್ದು ಸವದಿ(ತೇರದಾಳ, ಬಾಗಲಕೋಟೆ), ಮಹೇಶ್ ಕುಮಟಳ್ಳಿ( ಅಥಣಿ, ಬೆಳಗಾವಿ), ಮಸಾಲೆ ಜಯರಾಂ(ತುರುವೇಕೆರೆ, ತುಮಕೂರು) ಜ್ಯೋತಿ ಗಣೇಶ್(ತುಮಕೂರು), ರಾಜೇಶ್ ಗೌಡ(ಶಿರಾ, ತುಮಕೂರು), ಪರಣ್ಣ ಮುನವಳ್ಳಿ(ಗಂಗಾವತಿ, ಕೊಪ್ಪಳ).
ಬಿಎಸ್ವೈ ವಿರೋಧಿ ಬಣ
ಸಿ.ಪಿ.ಯೋಗೇಶ್ವರ್(ಎಂಎಲ್ಸಿ, ರಾಮನಗರ), ಎಚ್ ವಿಶ್ವನಾಥ್(ಎಂಎಲ್ಸಿ, ಮೈಸೂರು), ಅರವಿಂದ ಬೆಲ್ಲದ್(ಧಾರವಾಡ ಪಶ್ಚಿಮ) ಬಸನಗೌಡ ಪಾಟೀಲ್ ಯತ್ನಾಳ್(ವಿಜಯಪುರ ನಗರ).
ತಟಸ್ಥ ಬಣದ ಶಾಸಕರು
ಸುನೀಲ್ ಕುಮಾರ್(ಕಾರ್ಕಳ, ಉಡುಪಿ), ಉದಯ್ ಗರುಡಾಚಾರ್(ಚಿಕ್ಕಪೇಟೆ, ಬೆಂಗಳೂರು), ರೂಪಾಲಿ ನಾಯ್ಕ್(ಕಾರವಾರ, ಉತ್ತರ ಕನ್ನಡ), ಶಂಕರ್ ಪಾಟೀಲ್ ಮುನೇನಕೊಪ್ಪ(ನವಲಗುಂದ, ಧಾರವಾಡ), ಸೋಮಶೇಖರ್ ರೆಡ್ಡಿ(ಬಳ್ಳಾರಿ ನಗರ), ಸತೀಶ್ ರೆಡ್ಡಿ(ಬೊಮ್ಮನಹಳ್ಳಿ, ಬೆಂಗಳೂರು), ಪ್ರದೀಪ್ ಶೆಟ್ಟರ್(ಎಂಎಲ್ಸಿ).