ಬೆಂಗಳೂರು: ಬಿಎಂಟಿಸಿ ಬಸ್ ಗಳಲ್ಲಿ ಕೊರೊನಾ ನಿಯಮ ಪಾಲನೆ ಆಗದಿರುವುದನ್ನು ಮನಗಂಡ ಅಧಿಕಾರಿಗಳು, ಖುದ್ದು ಪರಿಶೀಲನೆಗೆ ಇಳಿದಿದ್ದಾರೆ.
ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿ ಹೊರ ಹೋಗುವ ಪ್ರತಿ ಬಸ್ ಗಳಲ್ಲೂ ಪರಿಶೀಲನೆ ಮಾಡುತ್ತಿದ್ದು, ಪ್ರಯಾಣಿಕರು ನಿಯಮ ಪಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂದು ನೋಡಿ ಬಳಿಕ ಬಸ್ ಗಳನ್ನು ರೂಟ್ ಗಳಿಗೆ ಹೊರಡಲು ಅವಕಾಶ ನೀಡುತ್ತಿದ್ದಾರೆ.
ಸರ್ಕಾರದ ಕೊರೊನಾ ನಿಯಮಾನುಸಾರ ಬಸ್ ಗಳಲ್ಲಿ ಶೇ.50ರಷ್ಟು ಸಾಮಥ್ರ್ಯದೊಂದಿಗೆ ಬಸ್ ಗಳಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಶೇ.50 ಕ್ಕಿಂತ ಹೆಚ್ಚು ಜನ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ, ಅಂತಹವರನ್ನು ಬಸ್ ನಿಂದ ಕೆಳಗಿಳಿಸಿ ಬೇರೆ ಬಸ್ ಗಳಲ್ಲಿ ಕಳುಹಿಸುವ ಮೂಲಕ ಕಡ್ಡಾಯ ನಿಯಮ ಪಾಲನೆಗೆ ಮುಂದಾಗಿದ್ದಾರೆ. ಬಸ್ ನಿರ್ವಾಹಕ ಮತ್ತು ಚಾಲಕರಿಗೂ ನಿಯಮ ಪಾಲನೆ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.