ಬೆಂಗಳೂರು: ಕಾಂಗ್ರೆಸ್ನವರು ಆಗೊಮ್ಮೆ ಈಗೊಮ್ಮೆ ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಇಂದಿನ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾಧ್ಯಮಗಳು ವಿಧಾನಸೌಧದಲ್ಲಿ ಕೇಳಿದ ಪ್ರಶ್ನೆಗೆ ಸಿಎಂ, ಯಾರನ್ನೋ ಕರೆದುಕೊಂಡು ಬಂದು ಪ್ರತಿಭಟಿಸಿದ್ದಾರೆ. ಕಾಂಗ್ರೆಸ್ನವರು ಭಾಷಣ ಶುರು ಮಾಡಿದ ತಕ್ಷಣ ಬಂದವರು ಎದ್ದು ಹೋಗಿದ್ದನ್ನು ನೀವೂ ನೋಡಿದ್ದೀರಿ. ಕಾಂಗ್ರೆಸ್ನವರು ಎಚ್ಚರವಾಗಿ ಎದ್ದು ನಿಂತು ಬದುಕಿದ್ದೇವೆ ಎಂದು ತೋರಿಸಲು ಈ ಪ್ರತಿಭಟನೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
Today, we are holding a massive protest along with Farmer groups against the anti-Farmer bills passed by the Union Government.
Congress workers & Farmers from across Karnataka have assembled to raise their voice & won't back down till these bills are repealed.#RajBhavanChalo pic.twitter.com/fOPdtfhF7S
— DK Shivakumar (@DKShivakumar) January 20, 2021
ನಾಳೆ ಖಾತೆ ಹಂಚಿಕೆ ಪಟ್ಟಿ ಪ್ರಕಟ ಮಾಡುತ್ತೇನೆ. ಪಟ್ಟಿ ಸಿದ್ಧವಾಗಿದ್ದು ಬೆಳಗ್ಗೆ ಬೆಳಗ್ಗೆ 7 – 8 ಗಂಟೆಗೆ ಖಾತೆ ಹಂಚಿಕೆಯನ್ನು ಪ್ರಕಟಿಸುತ್ತೇವೆ ಎಂದು ತಿಳಿಸಿದರು.