ಬಂಗಾರದ ಮೋಹದ ರಾಣಿಯ ಮಹಾವಂಚನೆಯ ಕಥೆ – RBI ಹೆಸರಿನಲ್ಲಿ ನಕಲಿ ದಾಖಲೆ

Public TV
2 Min Read
CKB WOMAN CHEATING RBI 1

ಚಿಕ್ಕಬಳ್ಳಾಪುರ: ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಗಾಳ ಹಾಕಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡ್ತಿದ್ದ ಮಹಿಳೆಯ ಮನೆ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯ ನಿವಾಸಿ ಅರ್ಚನಾ ನಿವಾಸ ಹಾಗೂ ಈಕೆಯ ಬಾಡಿಗಾರ್ಡ್ ಪ್ರಶಾಂತ ನಗರದ ನಟ ಶಂಕರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 75,000 ರೂ. ನಗದು, ಚಿನ್ನಾಭರಣ ಹಾಗೂ ನಕಲಿ ದಾಖಲೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

CKB WOMAN CHEATING RBI 3

ಏನಿದು ಪ್ರಕರಣ?
ಚಿಕ್ಕಬಳ್ಳಾಪುರ ನಗರದ ನಿವಾಸಿಯಾದ ಅರ್ಚನಾ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ರೈಸ್ ಪುಲ್ಲಿಂಗ್ ರೆಡಿಯಾಕ್ಟರ್ ನ್ನ ಯುನೈಟೆಡ್ ಕಿಂಗಡಮ್ ನ ಕಾಸ್ಮೋಮೆಟಲ್ ಕಂಪನಿಗೆ ಮಾರಾಟ ಮಾಡಿದ್ದೇನೆ. ಆರು ಲಕ್ಷ 35 ಸಾವಿರ ಕೋಟಿ ರೂಪಾಯಿ ಹಣ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫಾರಿನ್ ಎಕ್ಸ್ ಚೆಂಜ್ ಗೆ ತನ್ನ ಹೆಸರಿಗೆ ಬಂದಿದೆ. ಆ ಹಣವನ್ನು ನಾನು ಪಡೆದುಕೊಳ್ಳಲು ಆರ್ ಬಿಐ ಗೆ 24 ಕೋಟಿ ಸೆಸ್ ಹಣವನ್ನ ಪಾವತಿಸಬೇಕು ಎಂದು ಸುಳ್ಳು ಹೇಳಿದ್ದಳು.

CKB WOMAN CHEATING RBI 2

ಸೆಸ್ ಹಣವನ್ನ ಪಾವತಿಸಲು ತಾವು ತಮಗೆ 2 ಕೋಟಿ ನೀಡಿ. ಆ ಹಣ ಬಂದ ಕೂಡಲೇ ಅದರಲ್ಲಿ ತಮಗೆ 10 ಕೋಟಿ ಹಣವನ್ನು 24 ಗಂಟೆಯಲ್ಲಿ ಕೊಡೋದಾಗಿ ಹೇಳಿ ಮೂಲತಃ ಹೈದರಾಬಾದ್ ಹಾಗೂ ಬೆಂಗಳೂರಿಗನಲ್ಲಿ ಬಿಲ್ಡರ್ ಆಗಿರುವ ವಂಶಿಕೃಷ್ಣ ಎಂಬವವರಿಗೆ ಕೇಳಿಕೊಂಡಿದ್ದಾಳೆ. ಇನ್ನೂ ಮುರುಳಿಕೃಷ್ಣ ಸಹ ತಾನು ಹೊಸ ಪ್ರಾಜೆಕ್ಟ್ ಗೆ ಹಣ ಬೇಕಾಗಿದೆ. 2 ಕೋಟಿ ಕೊಡ್ತೀನಿ ನೀವು ನನಗೆ ಆ ಹಣ ಬಂದ ಕೂಡಲೇ 10 ಕೋಟಿ ಕೊಡಿ ಅಂತ ಮಾತುಕತೆ ವೇಳೆ ಒಪ್ಪಿಕೊಂಡಿದ್ದಾನೆ. ಅದರಂತೆ ಈಕೆ ಮೊದಲೇ ಆರ್‍ಬಿಐ ಹೆಸರಲ್ಲಿ ನಕಲಿ ದಾಖಲೆಗಳನ್ನ ಸಿದ್ಧ ಮಾಡಿದ್ದಾಳೆ.

CKB WOMAN CHEATING RBI 2

ದಾಖಲೆಗಳು ನಿಜ ಅಂತ ನಂಬಿದ ವಂಶಿ ಕೃಷ್ಣ, 2 ಕೋಟಿ 2 ಲಕ್ಷ ಹಣವನ್ನ ಕಳೆದ ಆಗಸ್ಟ್ ನಲ್ಲಿ ಕೊಟ್ಟಿದ್ದಾನೆ. ಆದ್ರೆ ಅದಾದ ನಂತರ ವಂಶಿಕೃಷ್ಣ ನನ್ನ ಅವೈಡ್ ಮಾಡಿದ್ದಾಳೆ. ಆಗ ತಾನು ವಂಚನೆಗೆ ಓಳಗಾಗ್ತಿದ್ದನ್ನ ಅಂತ ತಿಳಿದು ವಂಶಿಕೃಷ್ಣ ಹಣಕ್ಕೆ ಪಟ್ಟು ಹಿಡಿದಿದ್ದಾನೆ. ಈ ವೇಳೆ ಬಾಡಿಗಾರ್ಡ್ ನಟ ಶಂಕರ್ ಕೈಯಲ್ಲಿ ಧಮ್ಕಿ ಬೆದರಿಕೆ ಹಾಕಿಸಿದ್ದಾಳೆ. ಕೊನೆಗೆ ರೋಸಿ ಹೋದ ವಂಶಿಕೃಷ್ಣ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನಿನ್ನೆ ದೂರು ನೀಡಿದ್ದಾನೆ. ದೂರಿನನ್ವಯ ಇಂದು ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ವಂಚಕಿ ಅರ್ಚನಾ ಹಾಗೂ ನಟ ಶಂಕರ್ ಮನೆ ಮೇಲೆ ದಾಳಿ ನಡೆಸಲಾಗಿದೆ.

CKB WOMAN CHEATING RBI 3

ಸದ್ಯ ಎ 1 ಆರೋಪಿ ಈ ವಂಚಕಿ ಅರ್ಚನಾ ಕೋವಿಡ್ ಪಾಸಿಟಿವ್ ಆಗಿ ಕಳೆದ 4 ದಿನಗಳ ಹಿಂದೆಯೇ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾಳೆ. ಹೀಗಾಗಿ ಆಸ್ಪತ್ರೆ ಬಳಿ ಈಕೆ ಪರಾರಿಯಾಗಬಾರದು ಅಂತ ಪೊಲೀಸರಿನ್ನ ನಿಯೋಜಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಂಕರ್, ಅರ್ಚನಾ ತಮ್ಮ ಶ್ರೀ ಹರಿ ಹಾಗೂ ಸಂಬಂಧಿ ಶ್ರೀಪತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

CKB WOMAN CHEATING RBI 1

ಇನ್ನೂ ಈ ವಂಚಕಿ ಅರ್ಚನಾ ಕೇವಲ ವಂಶಿ ಕೃಷ್ಣ ಮಾತ್ರವಲ್ಲ ಇದೇ ರೀತಿ ಹಲವು ಪ್ರತಿಷ್ಟಿತ ಉದ್ಯಮಿಗಳು, ಶ್ರೀಮಂತರು, ವಕೀಲರು, ಚಾರ್ಟೆಂಡ್ ಅಕೌಂಟೆಂಟ್ ಗೂ ಸಹ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ವಂಶಿ ಕೃಷ್ಣ ಮಾತ್ರ ಈಕೆ ವಿರುದ್ಧ ದೂರು ದಾಖಲಿಸಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 420, 468, 471, 506, 120 ಜೊತೆ ಐಪಿಸಿ 34 ಆಕ್ಟ್ ನಡಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *