ಅಮರಾವತಿ: ಪ್ರೇಯಸಿ ತನ್ನನ್ನು ಪ್ರೀತಿಸಲು ನಿರಾಕರಿಸುತ್ತಿದ್ದಾಳೆ ಎಂದು ಆಕೆಯ ಮೇಲೆ ಪ್ರಿಯಕರ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಪ್ರೇಯಸಿಯ ಮೇಲೆ ಹಲ್ಲೆ ಮಾಡಿರುವ ಯುವಕನನ್ನು ಸುನೀಲ್ ಎಂದು ಗುರುತಿಸಲಾಗಿದೆ. ಈತ ಕಡಪ ಜಿಲ್ಲೆಯ ಪೋಧೋತ್ತೂರಿನವನಾಗಿದ್ದಾನೆ. ಸುನೀಲ್ ಕಳೆದ ಮೂರು ತಿಂಗಳಿನಿಂದ ತನ್ನ ನೆರೆಮನೆಯ 17 ವರ್ಷದ ಹುಡುಗಿಗೆ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನು. ಆದರೆ ಹುಡುಗಿ ಸುನೀಲ್ ನನ್ನು ಪ್ರೀತಿಸಲು ನಿರಾಕರಿಸಿದ್ದಾಳೆ. ಆದರೂ ಸುನೀಲ್ ಪದೇ ಪದೇ ತನ್ನನ್ನು ಪ್ರೀತಿಸುವಂತೆ ಆಕೆಯನ್ನು ಪಿಡಿಸುತ್ತಿದ್ದನು.
ಈ ವಿಚಾರವಾಗಿ ಹುಡುಗಿಯ ಕುಟುಂಬವು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ತಮ್ಮ ಮಗಳನ್ನು ಮನೆಯಲ್ಲಿ ಇರುವುದು ಬೇಡ ಎಂದು ಕಾಲೇಜು ಹಾಸ್ಟೆಲ್ಗೆ ಸೇರಿಸಿದ್ದರು. ಆದರೆ ಕೆಲವು ದಿನಗಳ ಮೇಲೆ ಆಕೆಯ ಮೇಲೆ ಕೋಪವನ್ನು ತೀರಿಸಿಕೊಳ್ಳಲು ಆಕೆಯನ್ನು ಕೊಲ್ಲಲು ನಿರ್ಧಾರ ಮಾಡಿದ್ದೇನೆ ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.
ತನ್ನ ಪ್ರೀತಿಯನ್ನು ಹುಡುಗಿ ನಿರಾಕರಿಸುತ್ತಿದ್ದಾಳೆ ಎಂದು ಒಂದು ದಿನ ಸುನೀಲ್ಗೆ ಕೋಪಗೊಂಡಿದ್ದಾನೆ. ಈ ವೇಳೆ ಹುಡುಗಿಯ ಮೇಲೆ ಚಾಕುದಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೈ ಮತ್ತು ತಲೆಗೆ ತೀವ್ರವಾಗಿ ಗಾಯಗಳಾಗಿವೆ ಎನ್ನಲಾಗುತ್ತಿದೆ.