ಪ್ರಿಪ್ಲಾನ್ ಮಾಡಿ 40 ದಿನದ ಹಸುಗೂಸನ್ನು ಕೆರೆಗೆ ಎಸೆದ ಪಾಪಿ ತಂದೆ!

Public TV
1 Min Read
FATHER

ತಿರುವನಂತಪುರಂ: ಹಸುಗೂಸನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಉನ್ನಿಕೃಷ್ಣನ್ ಎಂದು ಗುರುತಿಸಲಾಗಿದೆ. ಈತ ತನ್ನ 40 ದಿನದ ಮಗುವನ್ನು ಪ್ರಿಪ್ಲಾನ್ ಮಾಡಿ ಕೆರೆಗೆ ಎಸೆಯುವ ಮೂಲಕ ಕೊಲೆ ಮಾಡಿದ್ದಾರೆ.

police 1 e1585506284178 2 medium

ನೆಡುಮಂಗಡು ಮೂಲದ ಚಿಂಜು ಮತ್ತು ಪಚಲೂರ್ ಮೂಲದ ಉನ್ನಿಕೃಷ್ಣನ್ ದಂಪತಿಗೆ ಮಗು ಇದಾಗಿದೆ. ಉನ್ನಿಕೃಷ್ಣನ್ ಚಿಂಜು ಮೊದಲ ಪತ್ನಿಯಾದರೆ, ಚಿಂಜುಗೆ ಇದು ಎರಡನೇಯ ಮದುವೆಯಾಗಿತ್ತು. ಸತಿ-ಪತಿ ಮಧ್ಯೆ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಉನ್ನಿಕೃಷ್ಣನ್ ಮಗುವನ್ನು ಕೊಲೆ ಮಾಡಲು ಪೂರ್ವ ಯೋಜನೆ ಹಾಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಪತಿ ಹಾಗೂ ಮಗುವಿನ ಜೊತೆ ಚಿಂಜು ತನ್ನ ಪೋಷಕರು ಮನೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಉನ್ನಿಕೃಷ್ಣನ್ ಮಗುವನ್ನು ಎತ್ತಿಕೊಂಡು ಹೋಗಿ ಕೆರೆಗೆ ಎಸೆದಿದ್ದಾನೆ.

FATHER 1

ಇತ್ತ ಎಲ್ಲಿ ಹುಡುಕಿದರೂ ಮಗು ಸಿಗದಾಗ ಗಾಬರಿಗೊಂಡ ಚಿಂಜು ಪೊಲೀಸರಿಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಗುವಿನ ಪತ್ತೆಗೆ ಬಲೆ ಬೀಸಿದ್ದರು. ಅಲ್ಲದೆ ಮಗುವಿನ ತಂದೆ ಉನ್ನಿಕೃಷ್ಣನ್ ನನ್ನೇ ವಿಚಾರಣೆಗೆ ಒಳಪಡಿಸಿದರು.

ಈ ವೇಳೆ ಪೊಲೀಸ್ ಅಧಿಕಾರಿಗಳ ಬಳಿ ಸುಳ್ಳು ಹೇಳಿದ್ದಾನೆ. ಆದರೆ ಈತ ಕೆರೆ ಬಳಿ ಹೋಗಿದ್ದನ್ನು ಸ್ಥಳೀಯರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಉನ್ನಿಕೃಷ್ಣನ್ ಸಿಕ್ಕಿಬಿದ್ದಿದ್ದಾನೆ. ಮರುದಿನ ನಸುಕಿನ ಜಾವ 2 ಗಂಟೆ ಸುಮಾರಿಗೆ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಬಳಿಕ ಶವವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

Police Jeep 1 2 medium

Share This Article
Leave a Comment

Leave a Reply

Your email address will not be published. Required fields are marked *