ಯಾದಗಿರಿ: ಜೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಕಾಟಾಕ್ಕೆ ಬೇಸತ್ತು ನಾವು ಕೆಲಸ ಮಾಡಲ್ಲ ಅಂತ ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಇದನ್ನೂ ಓದಿ: ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ
ಲಾಕ್ಡೌನ್ ಆದಾಗಿಂದ ಯಾದಗಿರಿ ಟ್ರಾಫಿಕ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಜೆಸ್ಕಾಂ ಅಧಿಕಾರಿಗಳೆ ಟಾರ್ಗೆಟ್ ಅಂತೆ, ಬೆಸ್ಕಾಂ ಯಾವುದೇ ಸಿಬ್ಬಂದಿ ಅಥವಾ ಕಚೇರಿಯ ವಾಹನ ಕಂಡರೆ ಸಾಕು ಸೀಜ್ ಮಾಡ್ತಾರೆ ಫೈನ್ ಹಾಕ್ತಾರಂತೆ. ಹೀಗಾಗಿ ಜೆಸ್ಕಾಂ ಸಿಬ್ಬಂದಿ ನಾವು ಲಾಕ್ಡೌನ್ ಮುಗಿಯೊವರೆಗೂ ಕೆಲಸ ಮಾಡಲ್ಲ, ಪೊಲೀಸರ ಕಾಟ ಸಾಕಾಗಿದೆ ಅಂತ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗಾಗಿ ದೀದಿ V/s ಮೋದಿ – ಮತ್ತೆ ಕೇಂದ್ರದ ವಿರುದ್ಧ ಸಿಡಿದ ಮಮತಾ ಬ್ಯಾನರ್ಜಿ
ಜೆಸ್ಕಾಂ ಸಿಬ್ಬಂದಿ ಕರ್ತವ್ಯದಲ್ಲಿದ್ದ ವೇಳೆಯೇ ಮೂರ್ನಾಲ್ಕು ಬೈಕ್ಗಳನ್ನ ಸೀಜ್ ಮಾಡಿದ್ದಾರೆ. ನಾವು ಜೆಸ್ಕಾಂ ಸಿಬ್ಬಂದಿ ನಮ್ಮನ್ನ ಬಿಡಿ ಅಂದ್ರು ಐಡಿ ಕಾರ್ಡ ತೋರಿಸಿದರೂ ಬೈಕ್ ಸೀಜ್ ಮಾಡಿದ್ದಾರೆ, ಹೀಗಾಗಿ ನಾವು ಕೆಲಸ ಮಾಡಲ್ಲ ಅಂತ ಜೆಸ್ಕಾಂ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?
ಈ ವಿಷಯವನ್ನ ಗಂಭಿರವಾಗಿ ಪರಿಗಣಿಸಿ ಟ್ರಾಫಿಕ್ ಪಿಎಸೈ ಪ್ರದೀಪ್ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಎಸ್ ಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ನಾವು ಕೂಡಾ ಸರ್ಕಾರಿ ಸೇವೆ ಮಾಡುವವರು ನಮ್ಮ ಕರ್ತವ್ಯಕ್ಕೆ ಅನುಕೂಲ ಮಾಡಿಕೊಡಬೇಕು, ಅನಗತ್ಯವಾಗಿ ತೊಂದರೆ ಕೊಟ್ಟವರ ಮೇಲೆ ಕ್ರಮ ಆಗಬೇಕು ಅಂತ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.