– ಅಮ್ಮನ ಸಂತೈಸಿದ ಪುಟ್ಟ ಕಂದಮ್ಮ
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಕ್ರೂರಿತನಕ್ಕೆ 5 ವರ್ಷದ ಮಗು ಅಪ್ಪನ ಕಳೆದುಕೊಂಡಿದೆ. ತಾಯಿ-ಮಗನ ರೋಧನೆ ಮನಕಲಕುವಂತಿತ್ತು.
ಈ ಘಟನೆ ಯಲಹಂಕದ ಮೇಡಿ ಚಿತಾಗಾರದ ಮುಂದೆ ನಡೆದಿದೆ. ನಮ್ಮನ್ನ ಬಿಟ್ಟೋದ್ರಿ, ನಮಗೆ ಇನ್ಯಾರು ಗತಿ ಅಂತ ಪತ್ನಿ ಕಣ್ಣೀರು ಹಾಕಿದ್ರೆ, ಇತ್ತ ಪುಟ್ಟ ಕಂದಮ್ಮ ಮಾತ್ರ ಅಮ್ಮಾ.. ಅಪ್ಪಾ ಎಲ್ಲೂ ಹೋಗಿಲ್ಲ, ಬರ್ತಾರೆ ಎಂದು ಹೇಳುವ ಮೂಲಕ ಅಮ್ಮನನ್ನ ಸಮಾಧಾನ ಪಡಿಸಿದ ರೀತಿ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ತನ್ನ ರೌದ್ರನರ್ತನ ತೋರುತ್ತಿದ್ದು, ಜನ ಬೆಡ್, ಆಕ್ಸಿಜನ್ ಗಾಗಿ ಒದ್ದಾಡುತ್ತಿರುವುದು ಇಂದು ಕೂಡ ಕಂಡುಬಂದಿದೆ.