Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!

Crime

ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!

Public TV
Last updated: December 18, 2020 1:59 pm
Public TV
Share
3 Min Read
sushil
SHARE

– ಸ್ನೇಹಿತನಿಂದ್ಲೇ ಬ್ಯಾಂಕ್ ಅಧಿಕಾರಿಯ ಕಗ್ಗೊಲೆ
– ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದು ಹೇಗೆ?

ಮುಂಬೈ: ಬ್ಯಾಂಕ್ ಅಧಿಕಾರಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದು ಬಳಿಕ 12 ಪೀಸ್ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ ವಿಲಕ್ಷಣ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸುಶೀಲ್ ಕುಮಾರ್ (31) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತ ಚಾಲ್ರ್ಸ್ ನಡಾರ್(41) ಹಾಗೂ ಆತನ ಪತ್ನಿ ಸಲೋಮಿ(31)ಯನ್ನು ಬಂಧಿಸಲಾಗಿದೆ.

Police Jeep 1 2 medium

ರಾಯ್‍ಗಢ ಜಿಲ್ಲೆಯ ನುಲ್ಹಾ ಸಮೀಪದ ರೈಲ್ವೇ ನಿಲ್ದಾಣದ ಬಳಿ ಸುಶೀಲ್ ಮೃತದೇಹ ದೊರಕಿದೆ. ಎರಡು ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಬಿಸಾಕಲಾಗಿತ್ತು. ಬ್ಯಾಂಕ್ ಸಿಬ್ಬಂದಿಯಾಗಿರುವ ಸುಶೀಲ್, ಡಿಸೆಂಬರ್ 12ರಿಂದ ಗಾಂದಿನಗರದಲ್ಲಿರುವ ತಕ್ಷಶಿಲಾ ಕಟ್ಟಡದಿಂದ ನಾಪತ್ತೆಯಾಗಿದ್ದನು.

ನಾನು ಕಚೇರಿಯ ಸಹೋದ್ಯೋಗಿಗಳ ಜೊತೆ ಟ್ರಿಪ್ ಗೆ ಹೋಗುತ್ತಿದ್ದೇನೆ. ಭಾನುವಾರ ಸಂಜೆ ವಾಪಸ್ ಬರುವುದಾಗಿ ಸುಶೀಲ್ ತನ್ನ ತಾಯಿಯ ಬಳಿ ಹೇಳಿ ಹೋಗಿದ್ದಾನೆ. ಆದರೆ ಮಗ ಮನೆಗೆ ವಾಪಸ್ ಬರದೇ ಇರುವುದರಿಂದ ಆತಂಕಗೊಂಡ ತಾಯಿ, ಸೋಮವಾರದಿಂದ ಮಗನನ್ನು ಹುಡುಕಲು ಆರಂಭಿಸಿದ್ದಾರೆ. ಮಗ ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಬಳಿಯೂ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಸುಶೀಲ್ ಎಲ್ಲಿದ್ದಾನೆ ಎಂಬ ಬಗ್ಗೆ ಕಚೇರಿಯಲ್ಲಿದ್ದ ಸಿಬ್ಬಂದಿಗೂ ತಿಳಿಯದಾಗಿತ್ತು. ಹೀಗಾಗಿ ಕೊನೆಗೆ ತಾಯಿ ಡಿಸೆಂಬರ್ 14ರಂದು ವೊರ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

img 1608267803039 351

ತಾಯಿ ನೀಡಿದ ದೂರು ಸ್ವೀಕರಿಸಿ ಪೊಲೀಸರು ಸುಶೀಲ್ ಹುಡುಕಾಟ ಆರಂಭಿಸಿದ್ದಾರೆ. ಈ ಮಧ್ಯೆ ಪೊಲೀಸರಿಗೆ ಗುರುವಾರ ಬೆಳಗ್ಗೆ ಸುಶೀಲ್ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸುಶೀಲ್ ಪೋಷಕರನ್ನು ಕರೆಸಿದ್ದಾರೆ. ಅಂತೆಯೇ ಶವ ತಮ್ಮ ಮಗನದ್ದು ಎಂದು ಗುರುತು ಹಿಡಿದರು.

ಇತ್ತ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಬುಧವಾರ ಎರಡು ಸೂಟ್ ಕೇಸ್ ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸೂಟ್ ಕೇಸ್ ತೆರೆದು ನೋಡಿದಾಗ ಅದರಲ್ಲಿ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Police Jeep

ಸೂಟ್ ಕೇಸ್ ಮೇಲಿದ್ದ ಸ್ಟಿಕ್ಕರ್ ಮೂಲಕ ಇಡೀ ಪ್ರಕರಣವನ್ನು ಭೇದಿಸುವ ಪ್ರಯತ್ನ ಮಾಡಿದೆವು. ಸ್ಟಿಕ್ಕರ್ ಸಹಾಯದಿಂದ ಸೂಟ್ ಕೇಸ್ ಮಾರಾಟ ಮಾಡಿದವನ ಬಳಿ ಹೋದೆವು. ಆಗ ಆತ ಹೌದು ತನ್ನ ಅಂಗಡಿಯಿಂದಲೇ ಈ ಸೂಟ್ ಕೇಸ್ ಖರೀದಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಮುಂದಿನ ತನಿಖೆಗೆ ಸಹಾಯ ಕೂಡ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ಶವ ಸಿಕ್ಕ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಸ್ನೇಹಿತ ನಡಾರ್ ನನ್ನು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ನಡಾರ್ ಹಾಗೂ ಆತನ ಪತ್ನಿ ನೆರಲ್ ನಲ್ಲಿರುವ ನಿವಾಸದಿಂದ ಏನನ್ನೋ ಎತ್ತಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ.

Police

ಮುಂಬೈನ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಶೀಲ್ ಹಾಗೂ ಸಲೋಮಿ ಪರಿಚಯವಾಗಿದೆ. ಡಿಸೆಂಬರ್ 12ರಂದು ರಾತ್ರಿ ಸುಶೀಲ್ ನಡಾರ್ ಮನೆಗೆ ಬಂದಿದ್ದಾನೆ. ಅಲ್ಲದೆ ಈ ವೇಳೆ ನಡಾರ್ ಪತ್ನಿಯ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾನೆ. ಈ ಸಿಟ್ಟಿನಿಂದಲೇ ಪತಿ ಹಾಗೂ ಪತ್ನಿ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ದೇಹವನ್ನು 12 ಪೀಸ್ ಗಳನ್ನಾಗಿ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಗುರುವಾರ ರಾತ್ರಿ ಬಿಸಾಕಿದ್ದಾರೆ. ಮೃತದೇಹದಲ್ಲಿ ಬಲಕೈ ಮಿಸ್ ಆಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಈ ಇಬ್ಬರನ್ನು ಇಂದು ಕೋರ್ಟಿಗೆ ಹಾಜರುಪಡಿಸಲಾಗಿದೆ.

TAGGED:bankfriendhusbandmumbaiMurderPublic TVsuitcaseWifeಕೊಲೆಪತ್ನಿಪಬ್ಲಿಕ್ ಟಿವಿಬ್ಯಾಂಕ್ಮುಂಬೈಸೂಟ್ ಕೇಸ್ಸ್ನೇಹಿತ
Share This Article
Facebook Whatsapp Whatsapp Telegram

Cinema news

Rishab Shetty
ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ರಿಷಬ್ ದಂಪತಿ
Cinema Districts Karnataka Latest Sandalwood Top Stories
Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post

You Might Also Like

Shiva and Nandi idols vandalized on Maha Shivaratri In Mundaragi
Districts

ಮುಂಡರಗಿ| ಮಹಾ ಶಿವರಾತ್ರಿ ದಿನವೇ ಶಿವ, ನಂದಿ ವಿಗ್ರಹ ಭಗ್ನ

Public TV
By Public TV
3 minutes ago
G Parameshwar
Districts

ನ್ಯಾಯ ಒದಗಿಸೋದ್ರಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ನಂ.1 – ಪರಮೇಶ್ವರ್‌ ಮೆಚ್ಚುಗೆ

Public TV
By Public TV
33 minutes ago
Priyank Kharge
Bengaluru City

RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ

Public TV
By Public TV
39 minutes ago
asim munir id card
Latest

ಐಡಿ ಕಾರ್ಡ್‌ ತೋರಿಸಿ – ಜರ್ಮನಿಯಲ್ಲಿ ಅಸಿಮ್‌ ಮುನೀರ್‌ಗೆ ಮುಜುಗರ

Public TV
By Public TV
48 minutes ago
Kolar Someshwara Temple Shivratri Pooja
Districts

ಮಹಾಶಿವರಾತ್ರಿ ಸಂಭ್ರಮ – ಕೋಲಾರದ ಸೋಮೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ

Public TV
By Public TV
2 hours ago
Byrati Basavaraj 1
Court

ಬಿಕ್ಲು ಶಿವ ಕೊಲೆ ಕೇಸ್‌ – ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?