ಪತ್ನಿಯ ಕುತ್ತಿಗೆ ಕೊಯ್ದು ಕುಲದೇವತೆಗೆ ಬಲಿ ನೀಡಿದ ಗಂಡ

Public TV
1 Min Read
wife murder

-ತಂದೆಯಿಂದ ಮಗನಿಗೆ ಜೀವ ಬೆದರಿಕೆ
-ಅಪ್ಪನ ಕೃತ್ಯ ಬಿಚ್ಚಿಟ್ಟ ಮಗ

ಭೋಪಾಲ್: ವ್ಯಕ್ತಿಯೋರ್ವ ಮೂಢನಂಬಿಕೆಯಿಂದ ಪತ್ನಿಯ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇದ ಸಿಂಗರೌಲಿಯ ಬಸೌಡಾ ಗ್ರಾಮದಲ್ಲಿ ನಡೆದಿದೆ. ಕೊಲೆಯ ಬಳಿಕ ಕುಲದೇವತೆಯ ಪ್ರಸನ್ನಗೊಳಿಸಲು ಪತ್ನಿಯ ಕುತ್ತಿಗೆ ಕೊಯ್ದುರೋದಾಗಿ ಹೇಳಿಕೊಂಡಿದ್ದಾನೆ.

wife murder 2

ಬ್ರಿಜೇಶ್ ಕೆವಟ್ ಪತ್ನಿ ಬಿಟ್ಟಿದೇವಿಯನ್ನ ಕೊಲೆಗೈದ ಪತಿ. ಅಪ್ಪನ ಕೃತ್ಯಕ್ಕೆ ಮಗನೇ ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾನೆ. ತಂದೆ-ತಾಯಿ ಕುಲದೇವತೆಗೆ ಪೂಜೆ ಸಲ್ಲಿಸಿದ ಬಳಿಕ ನಾವೆಲ್ಲ ಮಲಗಿದೆವು. ತಡರಾತ್ರಿ ಒಳಗೆ ಅಪ್ಪ-ಅಮ್ಮ ಜಗಳ ಆಡುತ್ತಿರುವ ಧ್ವನಿ ಕೇಳಿದ್ದರಿಂದ ನನಗೆ ಎಚ್ಚರವಾಯ್ತು. ಇಬ್ಬರ ಜಗಳ ಆಡುತ್ತಾ ಜೋರು ಜೋರಾಗಿ ಮಾತಾಡುತ್ತಿದ್ದರು. ನಾನು ಅಪ್ಪನನ್ನ ತಡೆಯಲು ಹೋದಾಗ, ನೀವು ಮಧ್ಯ ಬರಬೇಡ ಅಂತಾ ನನ್ನನ್ನು ಹೊರಗೆ ಕಳಿಸಿದ್ರು.

wife murder 1

ಹೊರಗೆ ಬಂದ ಕೂಡಲೇ ಮನೆಯ ಬಾಗಿಲು ಹಾಕಲಾಯ್ತು. ತಂದೆ ಅಮ್ಮನನ್ನ ಕೊಂದು ಶವದ ಜೊತೆ ಹೊರ ಬಂದ್ರು. ತದನಂತರ ರುಂಡ ಮತ್ತು ಶವವನ್ನ ಹೂತರು. ನಾನು ಭಯದಿಂದ ಅಳಲು ಶುರು ಮಾಡಿದಾಗ ಕಿರುಚಾಡಬೇಡ, ಇಲ್ಲವಾದಲ್ಲಿ ನಿನ್ನನ್ನು ಕೊಂದು ಬಿಡ್ತೀನಿ ಅಂದು ಧಮ್ಕಿ ಹಾಕಿದರು.

crime scene

ಮಗುವಿನ ಅಳು ಶಬ್ಧ ಕೇಳಿ ಬಂದನೆರೆಹೊರೆಯವರು ಒಂದು ಕ್ಷಣ ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ವೀರೇಂದ್ರ ಪ್ರತಾಪ್ ಸಿಂಗ್, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆದು ಪೂಜೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *