ಬೆಂಗಳೂರು: ಪಟಾಕಿಯಿಂದ ಬಾಲಕನೊಬ್ಬ ಹಾನಿಗೊಳಗಾದ ಮೊದಲ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಮಾಸ್ಟರ್ ಎಸ್(12) ಗಾಯಗೊಂಡ ಬಾಲಕ. ಬೆಂಗಳೂರಿನ ವಿಜಯಾನಂದ ನಗರದ ನಿವಾಸಿಯಾಗಿರುವ ಈತನ ಮುಖಕ್ಕೆ ಗಾಯಗಳಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೂವಿನ ಕುಂಡ ಹಚ್ಚುವಾಗ ಮುಖಕ್ಕೆ ಗಾಯ ಆಗಿದೆ. ಮೂಗು ಮತ್ತು ಕಣ್ಣಿನ ಮೇಲ್ಭಾಗದ ಚರ್ಮ ಸುಟ್ಟು ಹೋಗಿದೆ. ಕಣ್ಣಿಗೆ ಹಾನಿಯಾಗಿರುವ ಸಾಧ್ಯತೆ ಇದ್ದು, ಸದ್ಯಕ್ಕೆ ಯಾವುದೇ ಅಪಾಯ ಇಲ್ಲ. ಮಿಂಟೋ ಆಸ್ಪತ್ರೆಯ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.