– ಹುಂಡಿಯಲ್ಲಿ ಭಕ್ತರ ವಿಚಿತ್ರ ಬೇಡಿಕೆಗಳ ಪತ್ರಗಳು ಪತ್ತೆ
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾದೇವಿ ಮಠದ ಹುಂಡಿಯಲ್ಲಿ ಅಮ್ಮಾ ಪಿಯುಸಿ ಪಾಸ್ ಮಾಡಿಸು, ಸರಾಯಿ ಸವಾಲ್ ಕೊಡಿಸು, ಎಂಬ ವಿಚಿತ್ರ ಪ್ರಾರ್ಥನೆಯನ್ನು ಕೋರಿ ದೇವರಿಗೆ ಬರೆದಿರುವ ಪತ್ರಗಳು ಪತ್ತೆಯಾಗಿವೆ.
ಅಂಬಾದೇವಿಯ ಹುಂಡಿಯಲ್ಲಿ ಭಕ್ತರ ವಿಚಿತ್ರ ಕೊರಿಕೆಗಳ ಪತ್ರಗಳು ಪತ್ತೆಯಾಗಿವೆ. ಐತಿಹಾಸಿಕ ಪ್ರಸಿದ್ಧ ದೇವಾಲಯದ ಹುಂಡಿಯಲ್ಲಿ ಭಕ್ತರು ತಮ್ಮ ಪ್ರಾರ್ಥನೆ ಜೊತೆ ನಾನಾ ವಿಲಕ್ಷಣ ಬೇಡಿಕೆಗಳ ಪತ್ರಗಳನ್ನ ಬರೆದು ಹಾಕಿದ್ದಾರೆ. ಈ ಬಾರಿಯ ಜಾತ್ರೆಯ ಹಿನ್ನೆಲೆ ಸಂಗ್ರಹವಾದ ಕಾಣಿಕೆ ಹಣ ಎಣಿಕೆ ವೇಳೆ ಪತ್ರಗಳು ಪತ್ತೆಯಾಗಿವೆ.
ಅಮ್ಮಾ ಪಿಯುಸಿ ಪಾಸ್ ಮಾಡಿಸು, ಸರಾಯಿ ಸವಾಲ್ ಕೊಡಿಸು, ಕಿರಿಕಿರಿ ಕೊಡುವವರಿಗೆ ದೊಡ್ಡ ಕಾಯಿಲೆ ಬರುವಂತೆ ಮಾಡು, ಅವರನ್ನ ಯಾರೂ ಮುಟ್ಟದಂತ ದೊಡ್ಡ ರೋಗ ಕೊಡು, ಪಕ್ಕದ ಮನೆಯ ಮಹಿಳೆಯರ ಕಿರಿಕಿರಿ ತಪ್ಪಿಸು, ಮನೆ ಕಟ್ಟೊ ಶಕ್ತಿ ಕೊಡು, ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸು, ಪ್ರೇಮ ವಿಚಾರಗಳು ಸೇರಿದಂತೆ ಹಲವು ಪತ್ರಗಳು ಪತ್ತೆಯಾಗಿವೆ.
ಜಾತ್ರೆಯ ಸಮಯದಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಲೆಕ್ಕಾಚಾರ ಹಾಕುವ ಸಮದಲ್ಲಿ ಪತ್ರಗಳು ಸಿಕ್ಕಿವೆ. ಹುಂಡಿಯಲ್ಲಿ ಈ ಬಾರಿ ಒಟ್ಟು 38 ಲಕ್ಷ ರೂಪಾಯಿ ನಗದು ಕಾಣಿಕೆ ಸಂಗ್ರಹವಾಗಿದೆ.