ನೆರೆ ವೀಕ್ಷಣೆಗೆ ತೆರಳಿದ ಗೃಹ ಸಚಿವ ಪ್ರವಾಹದಲ್ಲಿ ಸಿಲುಕಿ ಪರದಾಟ- ಏರ್‌ಲಿಫ್ಟ್‌ನಿಂದ ರಕ್ಷಣೆ

Public TV
1 Min Read
narottam mishra

ಭೋಪಾಲ್: ಪ್ರವಾಹದಲ್ಲಿ ಸಿಲುಕಿದ್ದ ಮಧ್ಯಪ್ರದೇಶದ ಗೃಹ ಸಚಿವ ನಾರೋತ್ತಮ್ ಮಿಶ್ರಾ ಅವರನ್ನು ಭಾರತೀಯ ವಾಯು ಸೇನೆಯವರು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್‌ ಮಾಡಿ ರಕ್ಷಿಸಿದ್ದಾರೆ.

ಮಧ್ಯ ಪ್ರದೇಶದ ದಟಿಯಾ ಜಿಲ್ಲೆಯ ಕೊಟ್ರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರವಾಹ ವೀಕ್ಷಣೆಗೆಂದು ಸಚಿವ ಮಿಶ್ರಾ ಅವರು ಎಸ್‍ಡಿಆರ್‍ಎಫ್ ನ ಮೋಟರ್ ಬೋಟ್‍ನಲ್ಲಿ ತೆರಳಿದ್ದರು. ಈ ವೇಳೆ ಬೋಟ್ ಬೃಹತ್ ಮರದಲ್ಲಿ ಸಿಲುಕಿದೆ. ಬಳಿಕ ಸಚಿವರು ಎಸ್‍ಡಿಆರ್‍ಎಫ್ ರಕ್ಷಣಾ ತಂಡದ ನಾಲ್ವರು ಮಹಿಳೆಯರೂ ಸೇರಿ 9 ಮಂದಿ ಜೊತೆ ಪಂಚಾಯಿತಿ ಕಟ್ಟಡಕ್ಕೆ ತೆರಳಿದ್ದಾರೆ.

narottam mishra 2

ಹೆಲಿಕಾಪ್ಟರ್ ಮೂಲಕ ಮೊದಲು ಪಂಚಾಯಿತಿ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದ್ದು, ಬಳಿಕ ಮಿಶ್ರಾ ಅವರನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ದಟಿಯಾದಲ್ಲಿರುವ ಅವರ ಮನೆಗೆ ತಲುಪಿಸಲಾಗಿದೆ. ಈ ಮೂಲಕ ನೆರೆ ವೀಕ್ಷಣೆಗೆ ತೆರಳಿದ ಸಚಿವರೇ ಪ್ರವಾಹದಲ್ಲಿ ಸಿಲುಕಿ ಪರದಾಡಿರುವ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *