ದಾವಣಗೆರೆ: ಕೋವಿಡ್ ಶುರುವಾದಾಗಿನಿಂದ ಜನರಿಗೆ ಸಹಾಯ ಮಾಡುವುದರಲ್ಲೇ ಕಾಲ ಕಳೆಯುತ್ತಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯರನ್ನು ತಿಮ್ಲಾಪುರ ಗ್ರಾಮದ ಜನತೆ ಕೊಂಡಾಡಿದ್ದಾರೆ.
ಗ್ರಾಮ ಗ್ರಾಮಗಲ್ಲಿ ಲಸಿಕಾ ಆಭಿಯಾನ ಶುರು ಮಾಡಿದ ಶಾಸಕ ರೇಣುಕಾಚಾರ್ಯ, ತಮ್ಮ ಕ್ಷೇತ್ರದಲ್ಲಿ ಲಸಿಕೆ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಲು ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲೇ ವಾಸ್ತವ್ಯ ಹೂಡಿದ್ದು, ಶಾಸಕರ ಕಾರ್ಯಕ್ಕೆ ತಿಮ್ಲಾಪುರ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿ, ಸನ್ಮಾನ ಮಾಡಿ ಅಭಿನಂದನೆ ತಿಳಿಸಿದರು.
ನೀವು ಇರುವ ತನಕ ಮೂರನೇ ಅಲೆ ಅಲ್ಲ, ಐದಾರು ಅಲೆಗಳು ಬಂದರೂ ನಮಗೆ ಎನೂ ಆಗಲ್ಲ. ನಿಮ್ಮಂಥ ಆತ್ಮಸ್ಥೈರ್ಯ ತುಂಬುವ ಶಾಸಕರಿದ್ದರೆ ಸಾಕು, ಯಾವ ಅಲೆ ಬಂದರೂ ನಮಗೆ ಎನೂ ಆಗಲ್ಲ ಎಂದು ಗ್ರಾಮಸ್ಥರು ಶಾಸಕರ ಕಾರ್ಯವನ್ನು ಕೊಂಡಾಡಿದರು.
ಇದಕ್ಕೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ, ನಾನು ರಾತ್ರಿ ಒಂದು ಗಂಟೆಗೆ ಮಲಗಿ, ಬೆಳಗ್ಗೆ ಐದು ಗಂಟೆಗೆ ಎದ್ದು, ಸೋಂಕಿತರಿಗೆ ಯೋಗ ಮಾಡಿಸುವೆ. ಮೂರನೇ ಅಲೆ ಎದುರಿಸಲು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.