ನೀನು ಯಾರು ನನ್ನ ಕೇಳುವುದಕ್ಕೆ – ಡಿಎಸ್ ವಿರುದ್ಧ ಮಂಜು ಗರಂ

Public TV
1 Min Read
manju 3 2

ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಿಂದಲೂ ಜೊತೆಯಾಗಿದ್ದ ಮಂಜು ಹಾಗೂ ದಿವ್ಯಾ ಸುರೇಶ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಆಗಾಗ ಇಬ್ಬರು ಸಿಟ್ಟು ಹಾಗೂ ಬೇಸರ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಎಷ್ಟೇ ಮನಸ್ತಾಪ ಇದ್ದರೂ ಇಬ್ಬರೂ ಕೊನೆಯಲ್ಲಿ ಇಬ್ಬರೂ ಒಂದಾಗಿ ಬಿಡುತ್ತಾರೆ.

manju 1 2

ಸದ್ಯ ವೈಷ್ಣವಿ ಹಾಗೂ ಪ್ರಶಾಂತ್‍ಗೆ ಬಿಗ್‍ಬಾಸ್ ಟಾಸ್ಕ್‌ವೊಂದನ್ನು ನೀಡಿರುತ್ತಾರೆ. ಈ ವೇಳೆ ಮಂಜು ಹಾಗೂ ದಿವ್ಯಾ ಸುರೇಶ್ ಇಬ್ಬರು ಒಟ್ಟಿಗೆ ವಾಕಿಂಗ್ ಮಾಡುತ್ತಿರುತ್ತಾರೆ. ಈ ವೇಳೆ ನಿನ್ನೆ ನೀನು ಆಡಿದ ಮಾತು ನೆನಪಾಯಿತು ಎಂದು ದಿವ್ಯಾ ಸುರೇಶ್ ಮಂಜುಗೆ ಹೇಳುತ್ತಾರೆ. ಆಗ ಮಂಜು ನಾನು ಏನೆಂದು ಹೇಳಿದೆ ಎಂದಾಗ, ಊಟ ಮಾಡುವಾಗ ನೀನು ಯಾರು ನನ್ನ ಕೇಳುವುದಕ್ಕೆ, ನೀನು ಏಕೆ ನನ್ನ ಕೇಳುತ್ತಿದ್ದಿಯಾ ಅಂತ ಕೇಳಿಲ್ವಾ ನೀನು. ಎಷ್ಟು ಕೋಪ ಮಾಡಿಕೊಂಡು ಆ ಮಾತನ್ನು ಹೇಳಿದೆ ಎಂದು ನಿನಗೆ ಗೊತ್ತಿದ್ಯಾ? ನಾನು ಯಾರು ಅಂದ ಮೇಲೆ ನನ್ನ ಜೊತೆ ಯಾಕೆ ಮಾತನಾಡುತ್ತಿಯಾ, ಮಾತಾಡಿಸಬೇಡ ಬಿಟ್ಟು ಬಿಡು. ನಾವಿಬ್ಬರು ಮತ್ತೆ ಮಾತನಾಡುವುದರಲ್ಲಿ ನನಗೆ ಅರ್ಥ ಇಲ್ಲ ಅನಿಸುತ್ತದೆ. ನೀನು ನನ್ನನ್ನು ಆ ರೀತಿ ಪ್ರಶ್ನೆ ಮಾಡುವಂತೆ ನಾನೇನು ಹೇಳಿಲ್ಲ ಎನ್ನುತ್ತಾ, ನಾನು ಮನೆ ಒಳಗೆ ಹೋಗುತ್ತೇನೆ ಅಂತ ಕೋಪ ಮಾಡಿಕೊಂಡು ದಿವ್ಯಾ ಸುರೇಶ್ ಹೋಗುತ್ತಾರೆ.

manju 4 1

ನಂತರ ಕಿಚನ್‍ನಲ್ಲಿ ದಿವ್ಯಾ ಸುರೇಶ್ ಕೆಲಸ ಮಾಡುತ್ತಿದ್ದಾಗ ಮಂಜು, ನೀನು ಏನು ಮಾತನಾಡಲೇ ಇಲ್ವಾ ಎಂದು ಪ್ರಶ್ನಿಸಿದಾಗ, ನೀನು ಯಾರು ಎಂದು ಕೇಳುವಷ್ಟು ನಾನೇನು ಮಾಡಿಲ್ಲ ಎಂದು ಹೇಳುತ್ತಾರೆ. ನನಗೆ ನೀನು ಒಳ್ಳೆ ಪ್ರಶ್ನೆಯನ್ನೇ ಕೇಳಿದೆ ಎಂದು ಅಳುತ್ತಾರೆ.

manju 2 2

ಏನು ಮಾಡುವುದು ಎಷ್ಟೇ ಆದರೂ ಬಿಟ್ಟು ಹೋಗುವುದಕ್ಕೆ ಆಗುವುದಿಲ್ವಲ್ಲಾ ಎನ್ನುತ್ತಾರೆ. ಆಗ ಮಂಜು 108 ದಿನಗಳಲ್ಲಿ ಯಾವತ್ತು ಈ ದಿನ ಬಂದಿರಲಿಲ್ಲ ಎನ್ನುತ್ತಾ ಬೇಸರ ವ್ಯಕ್ತಪಡಿಸುತ್ತಾರೆ. ಹೀಗೆ ಇಬ್ಬರು ಮಾತನಾಡುತ್ತಾ ಜೊತೆಗೆ ಕೈ ಹಿಡಿದುಕೊಂಡು ಒಂದಾಗಿದ್ದಾರೆ. ಇದನ್ನೂ ಓದಿ:ಅರವಿಂದ್ ವಸ್ತು ಕದಿಯಲು ಕಷ್ಟಪಟ್ಟೆ – ಟಾಸ್ಕ್ ಗೆದ್ದ ವೈಷ್ಣವಿಗೆ ಸಿಕ್ತು ಐಸ್‍ಕ್ರೀಂ

Share This Article
Leave a Comment

Leave a Reply

Your email address will not be published. Required fields are marked *