ನಿವೃತ್ತ ಪೊಲೀಸ್ ಅಧಿಕಾರಿಗೆ ಭಾನಾಮತಿ ಕಾಟ

Public TV
1 Min Read
BIJ 2

ವಿಜಯಪುರ: ಕರ್ತವ್ಯದಲ್ಲಿದ್ದಾಗ ಬೇರೆಯವರ ಸಮಸ್ಯೆ ಬಗೆಹರಿಸುತ್ತಿದ್ದ ಪೊಲೀಸ್ ಅಧಿಕಾರಿಗೆ ಭಾನಾಮತಿ ಕಾಟ ಪ್ರಾರಂಭವಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿ ನಿವೃತ್ತ ಎಎಸ್‍ಐ ಬಸವರಾಜ ಲಿಂಗದಳ್ಳಿ ಮನೆಗೆ ಕೊರಿಯರ್ ಮುಖಾಂತರ ಭಾನಾಮತಿಯ ವಸ್ತುಗಳು ಬರುತ್ತಿವೆ. ಕಳೆದ ಮೂರು ವರ್ಷಗಳಿಂದ ಈ ರೀತಿ ಭಾನಾಮತಿಯ ಕೊರಿಯರ್ ಕಾಟ ಶುರುವಾಗಿದ್ದು, ಇದುವರೆಗೆ ನಾಲ್ಕು ಕೊರಿಯರ್ ಬಂದಿವೆಯಂತೆ.

6c59d2ae c016 4db7 ad75 98355a7b4e89

ಕೊರಿಯರ್ ನಲ್ಲಿ ಗೊಂಬೆ, ಡಬ್ಬಣ, ಸೂಜಿ, ಅರಿಶಿಣ, ಕುಂಕುಮ, ಮೆಣಶಿನಕಾಯಿ, ನಿಂಬೆಹಣ್ಣು ಸೇರಿದಂತೆ ಇತರೇ ವಸ್ತುಗಳು ಬರುತ್ತವೆ. ಪರಿಚಯಸ್ಥರ ಹೆಸರಿನಲ್ಲಿ ಕೊರಿಯರ್ ಮೂಲಕ ಬಾನಾಮತಿ ವಸ್ತುಗಳು ಬರುತ್ತಿವೆ.

ಈ ಸಂಬಂಧ ಮುದ್ದೇಬಿಹಾಳ ಠಾಣೆಗೆ ದೂರು ಸಲ್ಲಿಸಿದ್ರೂ ಖದೀಮರು ಸಿಗುತ್ತಿಲ್ಲವಂತೆ. ಪೊಲೀಸ್ ಇಲಾಖೆಗೆ ಇದೊಂದು ತಲೆನೋವು ಕೇಸ್ ಆಗಿ ಹೋದಿದ್ದು, ಬಸವರಾಜ ಲಿಂಗದಳ್ಳಿ ಕುಟುಂಬಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

f0a7f530 fa6e 4106 b146 610f0c49ca2c

Share This Article
Leave a Comment

Leave a Reply

Your email address will not be published. Required fields are marked *