ವಾರಾಂತ್ಯದಲ್ಲಿ ಬಿಗ್ಬಾಸ್ ಜರ್ನಿ ಮುಗಿಸಿ ಹೊರನಡೆಯುವ ನಿರ್ಮಲಾ ಅವರಿಗೆ ಬಿಗ್ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಆದರೆ ನಿರ್ಮಲಾ ಅವರ ಮೌನ ಪ್ರಶಾಂತ್ ಅವರಿಗೆ ಕುತ್ತು ತಂದಿದೆ.
ಮುಂದಿನವಾರಕ್ಕೆ ಎಲಿಮಿನೇಷನ್ಗೆ ಯಾರನ್ನಾದರೂ ನಾಮಿನೇಟ್ ಮಾಡಬೇಕು ಎಂದು ಬಿಗ್ಬಾಸ್ ಹೇಳಿದಾಗ ನಿರ್ಮಲಾ ಅವರು ನನಗೆ ಮನೆಯಿಂದ ಹೊರ ಹೋಗುವಾಗ ಒಬ್ಬರನ್ನು ಉಳಿಸುವ ಅವಕಾಶವನ್ನು ಕೊಡಿಸಿ. ನನಗೆ ನಾಮಿನೇಟ್ ಮಾಡಲು ಇಷ್ಟವಿಲ್ಲ ಎಂದು ಬೇರೆಯದ್ದೇ ಮಾತನ್ನು ಪ್ರಾರಂಭಿಸಿದರು. ಕೊಂಚ ಸಮಯ ಬಿಗ್ಬಾಸ್ ನಿರ್ಮಲಾ ನಾಮಿನೇಟ್ ಹೆಸರನ್ನು ಸೂಚಿಸಲು ಕಾದಿದ್ದಾರೆ. ಆದರೆ ನಿರ್ಮಲಾ ಬಿಗ್ಬಾಸ್ ಹೇಳಿರುವ ವಿಚಾರವನ್ನು ಬಿಟ್ಟು ಬೇರೆಯದ್ದೇ ಮಾತನಾಡಲು ಪ್ರಾಂಭಿಸಿದಾಗ ಬೇಸರಗೊಂಡ ಬಿಗ್ಬಾಸ್, ನೀವು ಯಾರ ಹೆಸರನ್ನು ಸೂಚಿಸಿದ ಕಾರಣ ಪ್ರಶಾಂತ್ ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತೇವೆ ಎಂದು ಹೇಳಿ ಡೋರ್ ತೆರೆದು ಕಳುಹಿಸಿ ಕೊಟ್ಟಿದ್ದಾರೆ.
ಸೇಫ್ ಎಂದು ನಿಟ್ಟುಸಿರು ಬಿಟ್ಟ ಸಂಬರ್ಗಿಗೆ ಶಾಕ್!
2 ನೇವಾರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಶಾಂತ್ ನಾನು ಸೇಫ್ ಎಂದು ಸಂತೋಷ ಪಡುವ ಹೊತ್ತಲ್ಲೇ ಮತ್ತೆ ನಾಮೆನೇಟ್ ಆಗಿದ್ದಾರೆ. ನಾಮಿನೇಟ್ ಆಗಲು ನಿರ್ಮಲಾ ಅವರೆ ಕಾರಣವಾಗಿದ್ದಾರೆ.
ನಿರ್ಮಲಾ ನಡವಳಿಕೆಯಿಂದ ಬೇಸರ!
ಮನೆಯಲ್ಲಿರುವ ಸದಸ್ಯರು ಒಂದೆ ಕಡೆ ಇದ್ದರೆ ನಿರ್ಮಲಾ ಅವರೆ ಬೇರೆ ಕಡೆ ಇರುತ್ತಿದ್ದರು. ನಿರ್ಮಲಾ ಅವರ ಹಾದಿಯೆ ಬೇರೆ ಆಗಿರುತ್ತಿತ್ತು. ಹೀಗೆ ನಿರ್ಮಲಾ ಬಿಗ್ಬಾಸ್ ಆದೇಶವನ್ನು ಪಾಲಿಸದ ಕಾರಣ ಪ್ರಶಾಂತ್ ಸಂಬರ್ಗಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.
ಮನೆಯಿಂದ ಹೊರಹೋಗುವ ಮುನ್ನ ಒಬ್ಬರ ಹೆಸರನ್ನು ನೇರವಾಗಿ ನಾಮಿನೇಟ್ಗೆ ಸೂಚಿಸಿ ಎಂದು ಬಿಗ್ಬಾಸ್ ಹೇಳಿದ್ದರು. ನಿರ್ಮಲಾ ನನಗೆ ನಾಮಿನೇಟ್ ಮಾಡಲು ಇಷ್ಟವಿಲ್ಲ ಎಂದು ಸುಮ್ಮನೇ ನಿಂತಿದ್ದರು. ಹೀಗಾಗಿ ಯಾರು ಫೇಕ್ ಮತ್ತು ಯಾರು ಒಳ್ಳಯವರು ಎನ್ನುವ ಟಾಸ್ಕ್ನಲ್ಲಿ ನಿರ್ಮಲಾ, ಪ್ರಶಾಂತ್ ಅವರನ್ನು ಫೇಕ್ ಎಂದು ಸೂಚಿಸಿದ್ದರು. ಇದರ ಅನ್ವಯವಾಗಿ ಬಿಗ್ಬಾಸ್ ಪ್ರಶಾಂತ್ ಸಂಬರ್ಗಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.