ಬೆಂಗಳೂರು: ಇಡೀ ಮಾನವಕುಲಕ್ಕೆ ಸವಾಲಾಗಿರುವ ಕೊರೊನಾ ತನ್ನ ಬಣ್ಣ ಬದಲಾಯಿಸಿರೋದು ಮತ್ತಷ್ಟು ಆತಂಕ ತಂದೊಡ್ಡಿದೆ. ಭಾರತಕ್ಕೆ ಹೊಸ ರೂಪಾಂತರಿ ಕೊರೋನಾ ಕಾಲಿಟಿದ್ಯಾ ಎಂಬ ಪ್ರಶ್ನೆಗೆ ಪ್ರಶ್ನೆ, ಗೊಂದಲ, ಭಯ ಮುಂದುವರಿದಿದ್ದು ಇದಕ್ಕೆ ಇನ್ನೂ ಸಿಕ್ಕಿಲ್ಲ. ಇವತ್ತು ಕೇಂದ್ರ ಸರ್ಕಾರ ತಿಳಿಸಬಹುದು ಎನ್ನಲಾಗಿತ್ತು. ಆದರೆ ಇದು ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ನಾಳೆ ಸಂಜೆ 4 ಗಂಟೆ ಸುದ್ದಿಗೋಷ್ಠಿ ನಡೆಸಲಿದ್ದು, ಹೊಸ ಬಗೆಯ ಸೋಂಕು ದೇಶದಲ್ಲಿ ಹಬ್ಬಿದ್ಯಾ ಇಲ್ವಾ ಎನ್ನುವುದನ್ನು ಬಯಲು ಮಾಡಲಿದೆ. ಈ ವಿಚಾರವನ್ನು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬ್ರಿಟನ್ನಿಂದ ರಾಜ್ಯಕ್ಕೆ ಆಗಮಿಸಿದ 1,217 ಮಂದಿಯಲ್ಲಿ ಒಟ್ಟು 26 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಆದರೆ ಈ ಸೋಂಕು ಬ್ರಿಟನ್ ಸೋಂಕೇ ಎಂಬ ಬಗ್ಗೆ ಇನ್ನೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸ್ಪಷ್ಟೀಕರಣ ನೀಡಿಲ್ಲ. ಎಲ್ಲಾ ರಾಜ್ಯಗಳ ಪಾಸಿಟಿವ್ ವರದಿಗಳು ಈಗಾಗಲೇ ಐಸಿಎಂಆರ್ಗೆ ಸಲ್ಲಿಕೆ ಆಗಿವೆ.
ಬೆಂಗಳೂರಿನಲ್ಲಿ ಮಾತ್ರ, ಬ್ರಿಟನ್ನಿಂದ ಬಂದವರ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿದೆ. ಜೊತೆಗೆ ಮಹಾಲಕ್ಷ್ಮಿ ಲೇಔಟ್ ಸೋಂಕಿತರ ಸಂಪರ್ಕದಲ್ಲಿದ್ದ ಅವರ ತಾಯಿಗೂ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಬ್ರಿಟನ್ನಿಂದ ಬಂದವರ ಪೈಕಿ ಭಾರತದಲ್ಲಿ 120 ಮಂದಿಗೆ ಸೋಂಕು ಬಂದಿದ್ದರೆ ಕರ್ನಾಟಕದಲ್ಲಿ 27 ಮಂದಿಗೆ ಬಂದಿದೆ. ಬೆಂಗಳೂರು 16, ಶಿವಮೊಗ್ಗ 5, ಚಿಕ್ಕಮಗಳೂರು 2, ಮೈಸೂರು 2, ಬಾಗಲಕೋಟೆಯಲ್ಲಿ ಇಬ್ಬರಿಗೆ ಬಂದಿದೆ. ಬಾಗಲಕೋಟೆಯಲ್ಲಿ ಸಂಪರ್ಕದಿಂದ ಇಬ್ಬರಿಗೆ ಬಂದಿದ್ದರೆ ಬೆಂಗಳೂರಿನಲ್ಲಿ ಒಬ್ಬರಿಗೆ ಬಂದಿದೆ.