– ಈ ಬಾರಿ ನಾನು ಸುಮ್ಮನಿರಲ್ಲ
ಬಳ್ಳಾರಿ: ಖಾತೆ ಹಂಚಿಕೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ನಾಯಕರ ಅಸಮಧಾನ ಶುರುವಾಗಿದೆ. ನನಗೆ ಆ ಖಾತೆ ಬೇಕಿತ್ತು, ಈ ಖಾತೆ ಬೇಕಿತ್ತು ಎಂದು ಖ್ಯಾತೆ ತೆಗೆದಿದ್ದಾರೆ. ನಿರೀಕ್ಷೆ ಮಾಡಿದ ಖಾತೆ ಕೈ ತಪ್ಪಿದ್ದಕ್ಕೆ ಹೊಸಪೇಟೆ ಶಾಸಕ ಆನಂದ ಸಿಂಗ್ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಾನು ಕೇಳಿರುವ ಖಾತೆಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿಲ್ಲ, ಇದರ ಕುರಿತು ನನಗೆ ಬಹಳ ನೋವಿದೆ. ಪ್ರತಿ ಬಾರಿಯು ನನಗೆ ಸಣ್ಣ ಸಣ್ಣ ಖಾತೆ ನೀಡಿ ಹಿಂಪಡೆದುಕೊಳ್ಳಲಾತ್ತಿದೆ. ಈ ಹಿಂದೆ ಸುಮ್ಮನಿದ್ದೆ, ಆದರೆ ಈ ಬಾರಿ ನಾನು ಸುಮ್ಮನಿರಲ್ಲ. ನಾನು ಕೇಳಿರುವ ಖಾತೆ ಬೇಕು. ಮುಖ್ಯಮಂತ್ರಿಗಳು ನನಗೆ ಆ ಖಾತೆ ನೀಡ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.
ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಸುಮ್ಮನೆ ಬಿಡಲ್ಲ. ಅದು ಅಂತ್ಯ ಆಗುವವರೆಗೂ ಹೋರಾಡುತ್ತೆನೆ. ನಾನು ಅಂದುಕೊಂಡಿದ್ದನ್ನು ಮಾಡೋವರೆಗೂ ಬಿಡೋದಿಲ್ಲ ನಾನು ಹಠವಾದಿ. ನಾನು ಕೇಳಿರುವ ಖಾತೆ ಕೊಡದೇ ಇರಲು ಕಾರಣವಾದ್ರೂ ಬೇಕಲ್ಲ. ಯಾಕೆ ಕೊಟ್ಟಿಲ್ಲ ಅಂತ ಸಮರ್ಥವಾಗಿ ಅದನ್ನು ಮೊದಲು ಹೇಳಬೇಕು. ದೊಡ್ಡ ಖಾತೆ ನನಗೆ ಕೊಡದಿರುವದಕ್ಕೆ ಕಾರಣವೇನು? ನಾನೇನು ಭ್ರಷ್ಟಾಚಾರ ಮಾಡಿದ್ದೇನಾ? ಯಾವುದಾದರು ನನ್ನ ಮೇಲೆ ಕಪ್ಪು ಚುಕ್ಕೆ ಇದೆಯಾ? ಖಾತೆ ನಿಭಾಯಸದೆ ಇರುವಷ್ಟು ಅಸಮರ್ಥನೇ? ಯಾವ ಕಾರಣಕ್ಕೆ ನಾನು ಕೇಳಿದ ಖಾತೆ ನೀಡಿಲ್ಲ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ:ಕಾಂಗ್ರೆಸ್ಸಿನಿಂದ ಬಂದವರನ್ನ ಮಂತ್ರಿ ಮಾಡಬೇಕಾಗಿದ್ದರಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿತು: ರೂಪಾಲಿ ನಾಯ್ಕ
ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರದ ರಚನೆಗಾಗಿ ರಾಜೀನಾಮೆ ಕೊಡಬೇಕಾದ್ರೇ ಯಾರಿಗೂ ಹೇಳಿರಲಿಲ್ಲ. ಒಬ್ಬನೇ ಹೋಗಿ ರಾಜೀನಾಮೆ ಕೊಟ್ಟಿದ್ದೇನೆ, ಮುಂದೆ ಏನು ಎಂಬುವುದರ ಬಗ್ಗೆಯೂ ಕೂಡ ಯೋಚನೆ ಮಾಡದೆ ರಾಜೀನಾಮೆ ಕೊಟ್ಟಿರೋದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಬೇಸರ ಹೊರ ಹಾಕಿದರು. ಇದನ್ನೂ ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ – ಪಟ್ಟಿ ಪ್ರಕಟ