ಬೆಂಗಳೂರು: ರಾಷ್ಟ್ರ ಧರ್ಮ ಸಂಘಟನೆಯಿಂದ ನಾಣ್ಯಗಳನ್ನು ಬಳಸಿ ಶ್ರೀರಾಮ ಮಂದಿರ ಕಟೌಟ್ ನಿರ್ಮಾಣ ಮಾಡಲಾಗಿದೆ.
ರಾಷ್ಟ್ರ ಧರ್ಮ ಸಂಘಟನೆಯವರು 2 ಲಕ್ಷ ಬೆಲೆ ಬಾಳುವ 1 ಮತ್ತು 5 ರೂಪಾಯಿ ಮುಖಬೆಲೆಯ 70 ಸಾವಿರ ನಾಣ್ಯಗಳನ್ನು ಬಳಸಿ 30*40 ಸೈಜ್ ನ ಶ್ರೀರಾಮ ಮಂದಿರ ಚಿತ್ರ ಬಿಡಿಸಿದ್ದಾರೆ. ದಿನಾಂಕ 25.02.2021 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮದ್ಯೆ ಕ್ಷೇತ್ರೀಯ ಕಾರ್ಯವಾಹರು ಮತ್ತು ಅಭಿಯಾನದ ರಾಜ್ಯ ಕಾರ್ಯದರ್ಶಿಗಳಾದ ನಾ.ತಿಪ್ಪೇಸ್ವಾಮಿ,ಸಚಿವರಾದ ಆರ್ ಅಶೋಕ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಇನ್ನೂ ಅನೇಕರು ಉದ್ಘಾಟನೆಯಲ್ಲಿ ಪಾಲ್ಗೊಂಡರು.
ಲಾಲಬಾಗ್ ವೆಸ್ಟ್ ಗೇಟ್ ಬೆಂಗಳೂರು. ದಿನಾಂಕ 25 ರಿಂದ 27 ರ ಫೆಬ್ರವರಿವರೆಗೂ ಸಾರ್ವಜನಿಕರು ವೀಕ್ಷಿಸಬಹುದು.