ಬೆಂಗಳೂರು: ಕೆಜಿ ಹಳ್ಳಿ ಘಟನೆಗೆ ಪೊಲೀಸರೇ ಕಾರಣ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಸಿ.ಟಿ.ರವಿ ಆಕ್ರೋಶ ಹೊರ ಹಾಕಿದ್ದಾರೆ.
ಸಾಲು ಸಾಲು ಟ್ವೀಟ್ ಮಾಡಿರುವ ಸಚಿವರು, ಪೊಲೀಸರೇ ಡಿಜಿ ಹಳ್ಳಿ ಘಟನೆಗೆ ಕಾರಣ ಡಿಕೆ ಹೇಳಿಕೆ ಬಾಂಧವರದ್ದೇನು ತಪ್ಪಿಲ್ಲ. ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ ಗಲಭೆ ಎಬ್ಬಿಸಿದವರು ಬೆಂಕಿ ಹಾಕಿದವರ ಬಗ್ಗೆ ಮರುಕ! ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಬಹುದು. ನವೀನ್ ಕಳೆದ ಬಾರಿ ಬಿಜೆಪಿಗೆ ವೋಟು ಹಾಕಿದ್ದಾನೆ, ಡಿಕೆಶಿ ಹೇಳಿಕೆ, ವೋಟು ಸೀಕ್ರೆಟ್, ಡಿಕೆಶಿಗೆ ತಿಳಿದಿದ್ದು ಹೇಗೆ? ಸುಳ್ಳೇ ಇವರ ಮನೆ ದೇವರು ಎಂದು ಕಿಡಿಕಾರಿದ್ದಾರೆ.
ಗಲಭೆ ಎಬ್ಬಿಸಿದವರು ಬೆಂಕಿ ಹಾಕಿದವರ ಬಗ್ಗೆ ಮರುಕ! ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಬಹುದು.
— C T Ravi ???????? ಸಿ ಟಿ ರವಿ (@CTRavi_BJP) August 12, 2020
ಡಿಕೆಶಿ ಹೇಳಿದ್ದೇನು?: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಾಟೆಗೆ ಪೊಲೀಸರು ನೇರ ಕಾರಣ. ವಿವಾದಾತ್ಮಕ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮಕೈಗೊಂಡಿದ್ದರೆ ಗಲಾಟೆ ನಡೆಯುತ್ತಿರಲಿಲ್ಲ ಎಂದು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಪೊಲೀಸರೇ ಡಿಜಿ ಹಳ್ಳಿ ಘಟನೆಗೆ ಕಾರಣ
“DKS” ಹೇಳಿಕೆ, ಬಾಂಧವರದ್ದೇನು ತಪ್ಪಿಲ್ಲ. #ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ.
— C T Ravi ???????? ಸಿ ಟಿ ರವಿ (@CTRavi_BJP) August 12, 2020