ಬೆಂಗಳೂರು: ನಮ್ಮ ದೇಶದಲ್ಲಿ ವ್ಯಾಕ್ಸಿನ್ ಇಲ್ಲ. ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ. ಎಂಪಿ ಬಂದು ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತಾರೆ. ನಾನು ಕೂಡ ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತೇನೆ, ನನಗೂ ಅನುಮತಿ ಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮಹಾಮಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಯಾವುದೇ ತಯಾರಿ ಮಾಡಿಕೊಂಡಿಲ್ಲ. ಒಂದು ಕೋಟಿಗೆ ಆರ್ಡರ್ ಮಾಡಿದ್ದೇವೆ ಎಂದು ಹೇಳ್ತಾರೆ. ಆರೂವರೆ ಕೋಟಿ ವ್ಯಾಕ್ಸಿನ್ ಬೇಕು. ಅದು ಕೂಡ ಈ ತಿಂಗಳ ಕೊನೆಯಲ್ಲಿ ವ್ಯಾಕ್ಸಿನ್ ಸಿಗುತ್ತದೆ. ಇದು ನನಗೆ ಇರುವ ಮಾಹಿತಿ ಎಂದರು.
ಪೋಲಿಯೊ ಅಭಿಯಾನದ ರೀತಿಯಲ್ಲಿ ವ್ಯಾಕ್ಸಿನ್ ಅಭಿಯಾನ ಆಗಬೇಕು. ದೇಶದಾದ್ಯಂತ ಅಭಿಯಾನ ಆಗಬೇಕು. ಎರಡು ಡೋಸ್ ಪ್ರತಿಯೊಬ್ಬರಿಗೂ ಹಾಕಲೇಬೇಕು. ಯಾರಿಗೆ ಅಗತ್ಯವಿದೆ ಅವರಿಗೆಲ್ಲ ವ್ಯಾಕ್ಸಿನ್ ಹಾಕಬೇಕು. ಇದನ್ನು ಸರ್ಕಾರ ಮಾಡಲೇಬೇಕು. ವೈಫಲ್ಯ ಕಂಡಿರುವ ಸರ್ಕಾರಗಳಿವು ಪ್ರಧಾನಿ ಬೇಜವಬ್ದಾರಿ ಹೇಳಿಕೆ ಕೊಡ್ತಾರೆ. 162 ಯೂನಿಟ್ ಗಳಿಗೆ ಟೆಂಡರ್ ಕರೆದಿದ್ದಾರೆ. ಎಂಟು ತಿಂಗಳಲ್ಲಿ ಕೇವಲ ಮೂವತ್ತು ಯೂನಿಟ್ ಗಳ ಕೆಲಸ ಶುರು ಮಾಡಿವೆ. 162 ರಲ್ಲಿ ಕೇವಲ 30 ಯೂನಿಟ್ ಗಳು ಕೆಲಸ ಶುರು ಮಾಡಿವೆ. ಪಿಎಂ ಆರು ಕೋಟಿ ವ್ಯಾಕ್ಸಿನ್ ಬೇರೆ ದೇಶಕ್ಕೆ ಕಳಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ದೇಶದಲ್ಲಿ ವ್ಯಾಕ್ಸಿನ್ ಇಲ್ಲ. ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ. ಎಂಪಿ ಬಂದು ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತಾರೆ. ನಾನು ಕೂಡ ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತೇನೆ ನನಗೂ ಅನುಮತಿ ಕೊಡಿ. ಯಾರು ಎಂಪಿಗೆ ಅನುಮತಿ ಕೊಟ್ಟಿದ್ದು..? ಸತ್ತವರ ಅಂಕಿ ಅಂಶಗಳು ಸಹ ಸುಳ್ಳು ಹೇಳ್ತಾರೆ. ಎಚ್ಚರ ತೆಗೆದುಕೊಳ್ಳಲಿ ಎಂದು ನಾವು ಹೇಳ್ತೇವೆ. ಸರ್ಕಾರ ಜೊತೆ ಫೈಟ್ ಮಾಡ್ತಿಲ್ಲ. ನಿನ್ನೆ ಹೆಲ್ತ್ ಮಿನಿಸ್ಟರ್ ಗೆ ಫೋನ್ ಮಾಡಿದ್ದೇನೆ. ಫೋನ್ ಗೆ ಸಿಗಲ್ಲ ಹೆಲ್ತ್ ಮಿನಿಸ್ಟರ್. ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಆಗಿದೆ ಅಂದ್ರು.