Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನಮ್ಮನ್ನು ಬೆಂಬಲಿಸಿದ್ದರೆ ಸಿ.ಟಿ ರವಿ ದೊಡ್ಡವರಾಗುತ್ತಿದ್ದರು: ಎಂ.ಪಿ ಕುಮಾರಸ್ವಾಮಿ

Public TV
Last updated: August 13, 2021 1:52 pm
Public TV
Share
3 Min Read
MP KUMARSWAMY
SHARE

– ಬೇರೆ ಕ್ಷೇತ್ರಗಳ ಕಷ್ಟ ಸಿ.ಟಿ ರವಿಗೆ ಕಾಣಲ್ಲ
– 3 ವರ್ಷದಿಂದ ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲ
– ಕ್ಷೇತ್ರದಲ್ಲಿ ಏನೂ ಮಾಡದಿದ್ರೆ ಜನ ಅಪಹಾಸ್ಯ ಮಾಡ್ತಾರೆ

ಬೆಂಗಳೂರು: ನಮ್ಮನ್ನು ಬೆಂಬಲಿಸಿದರೆ ಸಿ.ಟಿ.ರವಿ ದೊಡ್ಡವರಾಗುತ್ತಿದ್ದರು ಎಂದು ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ವಿಧಾನಸೌಧದಲ್ಲಿ ಜಿಲ್ಲೆಗಳ ನಡುವೆ ತಾರತಮ್ಯ ಮಾಡಲಾಗಿದೆ ಎಂದು ಪ್ರತಿಭಟಿಸಿದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂಡಿಗೆರೆಯಲ್ಲಿ 2019ರಲ್ಲಿ ನೆರೆ ಬಂದಿತ್ತು. ಈ ವೇಳೆ ಅನೇಕರು ಪ್ರಾಣ ಕಳೆದುಕೊಂಡರು, ಎಷ್ಟೋ ಜನರ ಮನೆ ನಾಶವಾಯಿತು. ನೂರಾರು ಎಕರೆ ಜಮೀನನ್ನು ಜನರು ಕಳೆದುಕೊಂಡರು. ಆಗ ಯಡಿಯೂರಪ್ಪ ಅವರು ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ಅವರು ಇನ್ನೂ ಕೊಟ್ಟಿಲ್ಲ. ಎಷ್ಟೋ ಜನರು ಇನ್ನೂ ಬಾಡಿಗೆ ಮನೆಯಲ್ಲಿದ್ದು, ಬಾಡಿಗೆ ಕಟ್ಟಲು ಸಹ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ ಎಂದು ನೋವಿನಲ್ಲಿ ಹೇಳಿದ್ದಾರೆ.

mp kumarswamy 1

ಈ ನಡುವೆ ಕೊರೊನಾ ಬಂದ ಕಾರಣ ನಾವು ಸುಮ್ಮನಾಗಿದ್ದೆವು. ಆದರೆ ನಮ್ಮ ಕ್ಷೇತ್ರದಲ್ಲಿ ಜನರ ಕಷ್ಟ ನೋಡಲಾಗುತ್ತಿಲ್ಲ. ಅವರು ನಮಗೆ ಛೀಮಾರಿ ಹಾಕುತ್ತಿದ್ದಾರೆ. ಅದಕ್ಕೆ ನಾವು ಜನರಿಗಾಗಿ ಹೋರಾಟ ಮಾಡಬೇಕಾದ ಅವಶ್ಯವಿದೆ ಎಂದು ನಾನು ದನಿ ಎತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ಸರಿಯಾದ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ. ಅವರ ಮೇಲೆ ನಂಬಿಕೆ ಇದೆ ಎಂದು ತಿಳಿಸಿದರು.

BOMMAI 1

ನಿಮ್ಮ ಸಚಿವ ಸ್ಥಾನ ತಪ್ಪಿರುವುದಕ್ಕೆ ಸಿ.ಟಿ.ರವಿ ಅವರು ಕಾರಣನಾ..? ಎಂಬುದಕ್ಕೆ ಉತ್ತರಿಸಿದ ಅವರು, ಅದು ಈಗ ಅಪ್ರಸ್ತುತವಾಗುತ್ತೆ. ನಾನು ಆ ಕುರಿತು ಏನನ್ನೂ ಮಾತನಾಡುವುದಿಲ್ಲ. ಈಗ ನನಗೆ ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ನೆರವು ಅಷ್ಟೇ ಮುಖ್ಯ. ಅದು ಅಲ್ಲದೇ ಮಂತ್ರಿಯಾಗಿ ರವಿ ಅವರು ಅನುದಾನ ಪಡೆದುಕೊಂಡಿದ್ದಾರೆ. ಅವರು ಒಂದು ಮಾತು ನಮ್ಮ ಕ್ಷೇತ್ರದ ಬಗ್ಗೆ ಹೇಳಿದ್ದರೆ ಚೆನ್ನಾಗಿರುತ್ತಿತ್ತು, ಆಗ ಅವರು ದೊಡ್ಡವರಾಗುತ್ತಿದ್ದರು. ಅವರು ನಮ್ಮ ವಿಚಾರದಲ್ಲಿ ಪೂರ್ವಾಗ್ರಹ ಪೀಡಿತರು ಎಂದು ಕುಮಾರಸ್ವಾಮಿಯವರು ಅಸಮಾಧಾನ ಹೊರಹಾಕಿದರು.

ct ravi

ಕ್ಷೇತ್ರದಲ್ಲಿ ಸರಿಯಾದ ನೆರವು ಸಿಗುತ್ತಿಲ್ಲ ಎನ್ನುವುದಕ್ಕೆ ಪ್ರತಿಕ್ರಿಯಿಸಿ, ನನಗೆ ಯಾವುದೇ ರೀತಿಯ ಆಸೆಗಳಿಲ್ಲ. ಯಾರ ಬಳಿಯೂ ನಾವು ಮಂತ್ರಿ, ಸಚಿವ ಸ್ಥಾನಕ್ಕಾಗಿ ಹೋಗಿ ಕೇಳಿಕೊಂಡಿಲ್ಲ. ಜನರಿಗಾಗಿ ನಾನು ನಿನ್ನೆ ಹೋರಾಟ ಮಾಡಿದ್ದೇನೆ. ಅವರಿಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಅನುದಾನ ಕೊಡಿ ಎಂದು ಮಾತ್ರ ನಾವು ಕೇಳಿದ್ದೇವೆ. ಇಲ್ಲವಾದರೆ ನಾವು ನಮ್ಮ ಕ್ಷೇತ್ರದಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತೇವೆ ಎಂದಿದ್ದಾರೆ.

mp kumarswamy 2

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿಂದುಳಿದ ಏಕೈಕ ನಾಯಕರು, ಅದಕ್ಕೆ ಅವರನ್ನು ನಾನು ಭೇಟಿ ಮಾಡಿದ್ದೇನೆ. ಪ್ರತಿ ವರ್ಷ ಅವರ ಹುಟ್ಟುಹಬ್ಬದಿನ ಅವರಿಗೆ ವಿಶ್ ಮಾಡುತ್ತೇನೆ. ಪ್ರತಿ ವರ್ಷವು ಹೋಗುತ್ತೇನೆ. ಕಳೆದ ಬಾರಿಯೂ ಹೋಗಿದ್ದೆ. ಆಗ ತೊಂದರೆ ಇರಲಿಲ್ಲ, ಈಗ ಏಕೆ ಸಮಸ್ಯೆಯಾಗಿದೆ. ಅವರಿಗೆ ಪ್ರತಿ ರಾಜಕಾರಣಿಗಳು ಸಹ ಶುಭಕೋರಿದ್ದಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನೆ ಕೇಳಿದ್ದಾರೆ.

Siddaramaiah 1 medium

ನಿಮ್ಮದೇ ಪಕ್ಷದವರು ನಿಮ್ಮ ಮಾತಿಗೆ ಏಕೆ ಸ್ಪಂದಿಸುವುದಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನೂ ಇಲ್ಲ. ನಿನ್ನೆ ಕಂದಾಯ ಮಂತ್ರಿ ಆರ್. ಅಶೋಕ್ ಮತ್ತು ಬೊಮ್ಮಾಯಿ ಅವರು ಸ್ಪಂದಿಸಿದ್ದಾರೆ. ಅದಕ್ಕೆ ಇಂದು 3 ಗಂಟೆಗೆ ಹೋಗಿ ಅವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.

mp kumarswamy 5

ಸಚಿವ ಸ್ಥಾನ ಸಿಕ್ಕಿಲ್ಲದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ವಲಸಿಗರು ಬಂದಿಲ್ಲವೆಂದಿದ್ದರೆ ನಮಗೆ ಪೂರ್ಣ ಸರ್ಕಾರವೇ ಬರುತ್ತಿರಲಿಲ್ಲ. ಅವರು ಬಂದಿದ್ದು, ನಮಗೆ ಖುಷಿ ತಂದಿದೆ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಅದೇ ನಮಗೆ ಖುಷಿಯ ವಿಚಾರ. ಕ್ಷೇತ್ರಗಳ ಅಭಿವೃದ್ಧಿ ಮಾಡಲು ಸಹಾಯಕವಾಗಿದೆ. ಇದಕ್ಕಾಗಿ 3 ವರ್ಷ ಕಾಯುತ್ತಿದ್ದೆ. ಅದರೂ ನನ್ನ ಧ್ವನಿ ಅವರಿಗೆ ಕೇಳಿಸಲಿಲ್ಲವೆಂದು ಈ ಹೋರಾಟ ಮಾಡಿದೆ ಎಂದು ಎಂ.ಪಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ ಕುಮಾರಸ್ವಾಮಿ

TAGGED:CT RavipoliticsPublic TVಎಂ.ಪಿ.ಕುಮಾರಸ್ವಾಮಿಪಬ್ಲಿಕ್ ಟಿವಿರಾಜಕೀಯ MP Kumaraswamyಸಿ.ಟಿ ರವಿ
Share This Article
Facebook Whatsapp Whatsapp Telegram

Cinema news

balaramana dinagalu
ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಬಲರಾಮನ ದಿನಗಳು
Cinema Latest South cinema Top Stories
ashwini gowda
ʻನನ್ ತಲೇಲಿ ಬುದ್ಧಿ ಇಲ್ಲ’ ಹೇಳಲು ಅಶ್ವಿನಿ ಒಪ್ಪಲ್ಲ!
Cinema Latest TV Shows
Bigg Boss
ಗಿಲ್ಲಿ ಜೊತೆ ಕಿರಿಕ್ ಮಾಡ್ಕೊಂಡ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು
Cinema Latest Sandalwood Top Stories
Sathish Ninasam 2
ʻಏಳೋ ಏಳೋ ಮಾದೇವʼ ಸಾಂಗ್ – ಸತೀಶ್ ನೀನಾಸಂ ಸೂಪರ್
Cinema Latest Sandalwood

You Might Also Like

MURUGHA SHREE
Chitradurga

ಪೋಕ್ಸೋ ಪ್ರಕರಣದಲ್ಲಿ ಬಿಗ್‌ ರಿಲೀಫ್‌ – ಮುರುಘಾ ಶ್ರೀ ನಿರ್ದೋಷಿ

Public TV
By Public TV
1 minute ago
DK Shivakumar 7
Bengaluru City

ಸಿಎಂ ಹುದ್ದೆಗಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ: ಡಿಕೆಶಿ

Public TV
By Public TV
3 minutes ago
Nirmalanandanatha Swamiji
Districts

ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು: ನಿರ್ಮಲಾನಂದನಾಥ ಸ್ವಾಮೀಜಿ ಶಂಖನಾದ

Public TV
By Public TV
23 minutes ago
Shalini Rajneesh 1
Bengaluru City

ಹೂವುಗಳ ಮಾರಾಟದಂತೆ ಔಷಧೀಯ ಗಿಡಮೂಲಿಕೆಗಳಿಗೂ ಹರಾಜು ಅವಶ್ಯಕ – ಡಾ.ಶಾಲಿನಿ ರಜನೀಶ್

Public TV
By Public TV
30 minutes ago
modi stadium ahmedabad
Latest

ಅಹಮದಾಬಾದ್‌ನಲ್ಲಿ 2030ರ ಕಾಮನ್‌ವೆಲ್ತ್‌ ಗೇಮ್ಸ್‌ – ಈಗ ಅಧಿಕೃತ ಘೋಷಣೆ

Public TV
By Public TV
56 minutes ago
Hong Kong Buildings Fire
Latest

ಹಾಂಕಾಂಗ್ ಏಳು ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅವಘಡ; 13 ಸಾವು

Public TV
By Public TV
57 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?