– ಮುಂದಿನ ಎರಡು ವರ್ಷ ಬಿಎಸ್ವೈ ಅವರೇ ಸಿಎಂ ಆಗಿರಲಿ
ಬಳ್ಳಾರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕಷ್ಟಪಟ್ಟು ದುಡಿದು, ಪಕ್ಷವನ್ನು ಕಟ್ಟಿದ್ದಾರೆ. ಅವರನ್ನು ಮುಂದುವರಿಸಿದರೆ ತೊಂದರೆ ಏನು? ಇನ್ನೂ 2 ವರ್ಷ ಅವರೇ ಇದ್ರೆ ಉತ್ತಮ ಆಡಳಿತ ಕೊಡೋಕೆ ಸಾಧ್ಯ. ಅಲ್ಲದೆ ಯಾವ ರಾಜ್ಯದಲ್ಲೂ ನಮ್ಮಂತಹ ಸಿಎಂ ಇಲ್ಲ, ಅವರನ್ನ ಭೇಟಿ ಮಾಡೋದು ತುಂಬ ಸುಲಭ. ಭೇಟಿ ಮಾಡಿದಾಗ ಅಭಿವೃದ್ಧಿ ವಿಚಾರ ಮಾತ್ರ ಮಾತನಾಡುತ್ತಾರೆ. ಅವರ ಮನೆಗೆ ಹೋದ ಶಾಸಕರಿಗೆ ಊಟ, ತಿಂಡಿ ಕೊಟ್ಟು ಜೊತೆಯಲ್ಲೇ ಕುಳಿತು ಮಾತಾಡ್ತಾರೆ. ಈ ರೀತಿಯ ಸಿಎಂ ನನಗೆ ಬೇರೆಲ್ಲೂ ಸಿಗಲ್ಲ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ಹಗ್ಗ ಜಗ್ಗಾಟ ವಿಚಾರಕ್ಕೆ ಸೊಮಶೇಖರ ರೆಡ್ಡಿ ವ್ಯಂಗ್ಯವಾಡಿದ್ದು. ಕಾಂಗ್ರೆಸ್ ಯಾವಾಗ್ಲೂ ಅಷ್ಟೇ ಅವರ ಪಕ್ಷದಲ್ಲಿ ಇರೋದೇ ಆ ರೀತಿಯ ನಡುವಳಿಕೆ, ಒಂದು ಬಾರಿ ಅಧಿಕಾರಕ್ಕೆ ಬಂದರೆ ಐದು ಮಂದಿ ಚೇಂಜ್ ಮಾಡ್ತಾರೆ, ಸಿದ್ದರಾಮಯ್ಯನವರು ಪುಣ್ಯಕ್ಕೆ ಐದು ವರ್ಷ ಸಿಎಂ ಆಗಿ ರೆಕಾರ್ಡ್ ಮಾಡಿದ್ದು ಬಿಟ್ಟರೆ ಯಾವಾಗಲೂ ಕೇವಲ ಚೇಂಜ್ ಮಾಡ್ತಾನೆ ಇರ್ತಾರೆ. ಕಾಂಗ್ರೆಸ್ ನಲ್ಲಿ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾರೆ, ಅವರು ಕಾಲು ಎಳೆದು ಇವರು ಸಿಎಂ ಆಗ್ತೇನೆ ಅಂದ್ರೆ, ಇನ್ನೊಬ್ಬರು ಆಗೋದಕ್ಕೆ ಮತ್ತೊಬ್ಬರ ಕಾಲು ಎಳೆಯುತ್ತಾರೆ ಎಂದು ವೆಂಗ್ಯವಾಡಿದ್ದಾರೆ.