ಬೆಂಗಳೂರು: ಚಿರಂಜೀವಿ ಸರ್ಜಾ ಅವರ ಸಾವಿನ ಕುರಿತು ಪ್ರಶ್ನೆ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಧ್ರುವ ಸರ್ಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ ಸಂಬರಗಿ ಜೊತೆ ಧ್ರುವ ಸರ್ಜಾ ಅವರು ವಾಟ್ಸಪ್ ಮೂಲಕ ಮಾತನಾಡಿದ್ದು, ಅಣ್ಣ ಚಿರು ಸರ್ಜಾ ಸಾವಿನ ಬಗ್ಗೆ ಮಾತಾಡಿದ್ದ ಇಂದ್ರಜಿತ್ ವಿರುದ್ಧ ಬೇಸರ ಮಾಡಿಕೊಂಡಿದ್ದಾರೆ. ನೀವು ಚಿರು ಪರ ರಕ್ಷಣೆಗೆ ನಿಂತಿದ್ದು ನೋಡಿದೆ. ನಿಮಗೆ ನಮ್ಮ ಕುಟುಂಬದ ವತಿಯಿಂದ ಧನ್ಯವಾದಗಳು. ಆದರೆ ನಮಗೆ ಈ ವಿಚಾರದಿಂದ ಬಹಳ ನೋವಾಗಿದೆ ಎಂದು ಧ್ರುವ ಬೇಸರದಿಂದ ಮೆಸೇಜ್ ಮಾಡಿದ್ದಾರೆ. ಇದನ್ನೂ ಓದಿ: ಟಿವಿಯಲ್ಲಿ ಚಿರು ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ – ಇಂದ್ರಜಿತ್ ಆರೋಪಕ್ಕೆ ಮೇಘನಾ ಮಾತು
ಇಂದ್ರಜಿತ್ ಅವರು ಇತ್ತೀಚಿಗೆ ಮೃತಪಟ್ಟ ನಟನ ಮರಣೋತ್ತರ ಪರೀಕ್ಷೆ ಬಗ್ಗೆ ಮಾತನಾಡಿದ್ದರು. ಅಲ್ಲದೇ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ ಎಂದು ಇಂದ್ರಜಿತ್ ಪ್ರಶ್ನಿಸಿದ್ದರು. ಇದರಿಂದ ಧ್ರುವ ಸರ್ಜಾ ಇಂದ್ರಜಿತ್ ಲಂಕೇಶ್ ವಿರುದ್ಧ ಸಿಟ್ಟಾಗಿದ್ದಾರೆ.
ಚಿರು ಸಾವಿನ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತಿಗೆ ಪ್ರಶಾಂತ್ ಸಂಬರಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿನ ನೋವಿನಲ್ಲಿರುವ ಸರ್ಜಾ ಫ್ಯಾಮಿಲಿಗೆ ಇಂದ್ರಜಿತ್ ಮತ್ತಷ್ಟು ನೋವು ಕೊಡುವ ಕೆಲಸ ಮಾಡಿದ್ದಾರೆ. ತುಂಬು ಗರ್ಭಿಣಿ ಮೇಘನಾಗೆ ಈ ವಿಚಾರ ಆಘಾತ ಉಂಟು ಮಾಡಿದೆ. ಈ ವಿಚಾರ ತಿಳಿದು ಮೇಘನಾ ಕಣ್ಣೀರು ಹಾಕಿದ್ದಾರೆ. ಡ್ರಗ್ ಮಾಫಿಯಾದಲ್ಲಿ ಅಣ್ಣನ ಹೆಸರು ಬಂದಿರುವುಕ್ಕೆ ಧ್ರುವ ಸರ್ಜಾ ಅವರಿಗೆ ಬೇಸರ ತಂದಿದೆ ಎಂದಿದ್ದಾರೆ.