-ಮನೆಯ ಬಳಿ ಪಿಕ್ ಮಾಡಿದ್ದ
ಲಕ್ನೋ: ಆಗ್ರಾದ ಮೆಡಿಕಲ್ ವಿದ್ಯಾರ್ಥಿನಿ ಡಾ.ಯೋಗಿತಾ ಗೌತಮ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಡಾ. ವಿವೇಕ್ ತಿವಾರಿ ಬಂಧಿತ ಆರೋಪಿ. ಮೊರದಾಬಾದ್ ವಿಶ್ವವಿದ್ಯಾಲಯದಲ್ಲಿ ವಿವೇಕ್ ತಿವಾರಿ ಮತ್ತು ಯೋಗಿತಾ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನಲ್ಲಿ ಸೀನಿಯರ್ ಆಗಿದ್ದ ವಿವೇಕ್ ಎರಡು ವರ್ಷಗಳ ಹಿಂದೆ ಯೋಗಿತಾ ಮುಂದೆ ಮದುವೆ ಪ್ರಸ್ತಾಪ ಇರಿಸಿದ್ದ. ಆದ್ರೆ ಯೋಗಿತಾ ಪ್ರಪೋಸಲ್ ತಿರಸ್ಕರಿಸಿದ್ದು. ತದನಂತರ ಯೋಗಿತಾ ಆಗ್ರಾದ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಸ್ತ್ರೀರೋಗ ವಿಭಾಗದಲ್ಲಿ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದರು.
ಆಗ್ರಾದ ಜಲೌನ್ ಗೆ ಮೆಡಿಕಲ್ ಆಫಿಸರ್ ಆಗಿ ವಿವೇಕ್ ವರ್ಗಾವಣೆಗೊಂಡಿದ್ದನು. ಆಗಸ್ಟ್ 18ರಂದು ಮಾತನಾಡುವ ನೆಪದಲ್ಲಿ ಯೋಗಿತಾರನ್ನ ಕರೆದಿದ್ದಾನೆ. ತನ್ನ ಕಾರಿನಲ್ಲಿಯೇ ಯೋಗಿತಾ ವಾಸವಾಗಿದ್ದ ಬಾಡಿಗೆ ಮನೆಯಿಂದ ಪಿಕ್ ಮಾಡಿದ್ದಾನೆ. ಈ ವೇಳೆ ಕಾರ್ ನಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ವಿವೇಕ್ ಬಲವಾಗಿ ಯೋಗಿತಾ ತಲೆಗೆ ಹೊಡೆದಿದ್ದಾನೆ. ಪರಿಣಾಮ ಯೋಗಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಯೋಗಿತಾ ಶವವನ್ನು ದೌಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಮ್ರೌಲಿ ಕತ್ರಾ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ.
ಆಗಸ್ಟ್ 18 ಮಂಗಳವಾರ ರಾತ್ರಿ ಯೋಗಿತಾ ಪೋಷಕರು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಡಾ.ವಿವೇಕ್ ತಿವಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸ್ ವಿಚಾರಣೆ ವೇಳೆ ಆರೋಪಿ ವಿವೇಕ್, ತನ್ನದು ಒನ್ ಸೈಡ್ ಲವ್, ಪ್ರೀತಿ ಒಪ್ಪಿಕೊಳ್ಳದಕ್ಕೆ ಜಗಳ ನಡೆದಾಗ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದರಿಂದ ಸಾವನ್ನಪ್ಪಿದಳು ಎಂದು ವಿವೇಕ್ ಒಪ್ಪಿಕೊಂಡಿದ್ದಾನೆ.