ನದಿ ಸ್ನಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

Public TV
0 Min Read
rcr death 1

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮುದುಗೋಟ ಬಳಿ ಕೃಷ್ಣಾ ನದಿಯಲ್ಲಿ ಬುಧವಾರ ಸ್ನಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಲಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ದೇವದುರ್ಗದ ರಂಗನಾಥ್ (12) ನದಿಯಲ್ಲಿ ಶವವಾಗಿ ಪತ್ತೆಯಾಗಿರೋ ದುರ್ದೈವಿ ಬಾಲಕ. ಮುದುಗೋಟ ಗ್ರಾಮದ ದ್ಯಾವಮ್ಮ ಜಾತ್ರೆಗೆ ಬಂದಿದ್ದ ಬಾಲಕ ಸ್ನೇಹಿತರೊಂದಿಗೆ ನದಿಗೆ ಈಜಾಡಲು ಹೋಗಿ ನಾಪತ್ತೆಯಾಗಿದ್ದ. ಬಾಲಕನಿಗಾಗಿ ಜಾಲಹಳ್ಳಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಿನ್ನೆ ಸಂಜೆವರೆಗೂ ಹುಡುಕಾಟ ನಡೆಸಿದ್ದರು.

rcr death 2 1

ಇಂದು ಬೆಳಗ್ಗೆ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ಹಿನ್ನೆಲೆ ಜಾಲಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *