Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

Public TV
Last updated: September 3, 2020 3:14 pm
Public TV
Share
3 Min Read
udp pejavara vishweshateertharu
SHARE

– ಶ್ರೀಗಳ ಚಾತುರ್ಮಾಸ್ಯ ಸಮಾಪ್ತಿ

ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ವೃತಾಚರಣೆ ಅಂತ್ಯಗೊಂಡಿದೆ. ಪೇಜಾವರ ಮಠದ ಶಾಖಾ ಮಠವಾಗಿರುವ ನೀಲಾವರದಲ್ಲಿ ಈ ಬಾರಿ ಶ್ರೀಗಳು ವೃತಾಚರಣೆ ಕೈಗೊಂಡಿದ್ದರು. ಎರಡು ತಿಂಗಳುಗಳ ಕಾಲ ಪೂಜೆ ಪುನಸ್ಕಾರ, ವ್ರತಾಚರಣೆ ಜೊತೆ ಗೋವುಗಳ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.

WhatsApp Image 2020 09 03 at 2.03.53 PM

ಚಾತುರ್ಮಾಸ್ಯದ ಕೊನೆಯ ಪೂಜೆಯನ್ನು ಶ್ರೀಗಳು ನೆರವೇರಿಸಿದದರು. ಆರಂಭದಲ್ಲಿ ಪಟ್ಟದ ದೇವರಿಗೆ ನಂತರ ಗೋಶಾಲೆಯ ಕೆರೆಯ ಮಧ್ಯೆ ಇರುವ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆಯನ್ನು ಅರ್ಪಿಸಿದರು. ಚಾತುರ್ಮಾಸ್ಯ ಆರಂಭದಲ್ಲಿ ಮೃತ್ತಿಕೆಯನ್ನು ಮಾಡಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಾತುರ್ಮಾಸದ ಅಂತ್ಯಕಾಲದಲ್ಲಿ ಮೃತ್ತಿಕಾ ವಿಸರ್ಜನೆಯನ್ನು ದೇವಸ್ಥಾನದ ಕೆರೆಯಲ್ಲಿ ಶ್ರೀಗಳು ನೆರವೇರಿಸಿದರು. ಚಾತುರ್ಮಸ್ಯ ವೃತಾಚರಣೆಯನ್ನು ಬಿಟ್ಟ ನಂತರ ಭಕ್ತಾದಿಗಳಿಗೆ ತೀರ್ಥವನ್ನು ಕೊಡುವ ಸಂಪ್ರದಾಯವಿದೆ. ಹೀಗಾಗಿ ಸ್ವತಃ ಸ್ವಾಮೀಜಿಯವರೇ ತೀರ್ಥ ವಿತರಣೆ ಮಾಡಿದರು.

WhatsApp Image 2020 09 03 at 2.04.22 PM

ಚತುರ್ಮಸ್ಯ ಸಮಾಪ್ತಿ ಆದ ಹಿನ್ನೆಲೆ ನೀಲಾವರ ಗೋಶಾಲೆಯಲ್ಲಿ ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ ಏರ್ಪಡಿಸಲಾಗಿತ್ತು. ಒಂದು ಊರಿನಲ್ಲಿ ಸ್ವಾಮೀಜಿ ವ್ರತಾಚರಣೆಯನ್ನು ಕೈಗೊಂಡರೆ ವೃತ ಮುಗಿದ ಮೇಲೆ ಅವರು ಊರನ್ನು ಬಿಡಬೇಕು ಎಂಬ ನಂಬಿಕೆಯಿದೆ. ಸಂಪ್ರದಾಯದಂತೆ ಸ್ವಾಮೀಜಿಯವರು ಸೀಮೋಲ್ಲಂಘನ ಮಾಡಿದರು. ನೀಲಾವರದಿಂದ ಎರಡು ಕಿಲೋಮೀಟರ್ ನಷ್ಟು ದೂರ ಇರುವ ಸೀತಾನದಿಯಲ್ಲಿ ಪ್ರಕ್ರಿಯೆ ನೆರವೇರಿತು. ನದಿ ತಟದ ಪಂಚಮಿಕಾನ ನಾಗ ಕ್ಷೇತ್ರದಲ್ಲಿ ಸ್ವಾಮೀಜಿಗಳು ದೋಣಿಯಲ್ಲಿ ಕುಳಿತು ಸೀತಾನದಿಯನ್ನು ದಾಟುವ ಪ್ರಕ್ರಿಯೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಗ್ರಾಮಸ್ಥರು, ಸ್ಥಳೀಯರಿಂದ ಗೌರವ ಸಲ್ಲಿಸಲಾಯಿತು. ಸ್ವಾಮೀಜಿ ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಿ ಊರಿನ ಸಕಲ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿದರು. ಬಿಳಿ ಕುದುರೆ ಏರಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪುರಪ್ರವೇಶ ನಡೆಸಿದರು.

WhatsApp Image 2020 09 03 at 2.03.55 PM

ಯತಿಗಳಿಗೆ ಚಾತುರ್ಮಾಸ್ಯ ವ್ರತ ಬಹಳ ಮಹತ್ವದ್ದು. ಈ ಸಂದರ್ಭದಲ್ಲಿ ಆಹಾರದ ನಿಯಮ, ಒಂದು ಪ್ರದೇಶದಲ್ಲಿ ಉಳಿದು ದೇವರ ಕಾರ್ಯ ಮಾಡುವಂತದ್ದು. ಈ ಸಂದರ್ಭದಲ್ಲಿ ನಾಲ್ಕು ತಿಂಗಳು ವೃತ ಆಚರಣೆ ಆಗುತ್ತದೆ. ಭಗವಂತ ಪವಡಿಸುವ ಸಂದರ್ಭದಲ್ಲಿ ವಿಶೇಷ ಸಾಧನ ಅನುಷ್ಠಾನಗಳನ್ನು ಮಾಡಬೇಕು. ನಾಲ್ಕು ಮಾಸಗಳ ಕಾಲ ನಾಲ್ಕು ಪ್ರತ್ಯೇಕ ಆಹಾರ ಪದ್ಧತಿಯನ್ನು ಕೂಡ ಅನುಸರಿಸಲಾಗುತ್ತದೆ. ಮೊದಲ ಮಾಸದಲ್ಲಿ ತರಕಾರಿ ಮತ್ತು ಕೆಲವು ಧಾನ್ಯಗಳನ್ನು ಸೇವಿಸುವುದು ನಿಷೇಧ ವಾಗಿರುತ್ತದೆ. 2ನೇ ಮಾಸ ಮೊಸರನ್ನು ಸಂಪೂರ್ಣವಾಗಿ ತ್ಯಾಗ ಮಾಡುತ್ತೇವೆ. 3ನೇ ತಿಂಗಳಿನಲ್ಲಿ ಹಾಲನ್ನು ಸಂಪೂರ್ಣವಾಗಿ ತ್ಯಾಗ ಮಾಡಿ, ಮತ್ತೆಲ್ಲ ವಸ್ತುಗಳನ್ನು ಉಪಯೋಗ ಮಾಡುತ್ತೇವೆ. ನಾಲ್ಕನೆ ತಿಂಗಳು ದ್ವಿದಳ ಧಾನ್ಯಗಳನ್ನು ಒಳಗೊಳ್ಳುವಂತಹ ತರಕಾರಿ ಮತ್ತು ಯಾವುದೇ ಆಹಾರ ವಸ್ತುಗಳನ್ನು ಸೇವನೆ ಮಾಡುವುದಿಲ್ಲ. ಅಹಿಂಸಾ ವ್ರತವನ್ನು ಪಾಲನೆ ಮಾಡಬೇಕು. ಅದರಲ್ಲೂ ಚಾತುರ್ಮಾಸ್ಯ ಸಂದರ್ಭದಲ್ಲಿ ಓಡಾಟ ಮಾಡುವಂತಿಲ್ಲ. ಇದಕ್ಕೆ ಧೃಡವಾದ ಕಾರಣಗಳಿವೆ. ಮಳೆಗಾಲದಲ್ಲಿ ಹುಳು ಹುಪ್ಪಟೆಗಳು ಜಂತುಗಳು ಹುಟ್ಟುವಂತಹ ಕಾಲ. ಸಂಚಾರ ಕಾಲದಲ್ಲಿ ನಡಿಗೆ, ವಾಹನಗಳ ಅಡಿಗೆ ಬಿದ್ದು ಜೀವಿಗಳು ಸಾವನ್ನಪ್ಪುವ ಸಾಧ್ಯತೆ ಇರುವುದರಿಂದ ಓಡಾಟ ಸಲ್ಲದು ಎಂದು ಪೇಜಾವರಶ್ರೀ ಹೇಳಿದರು.

WhatsApp Image 2020 09 03 at 2.04.10 PM

ಈ ಕುರಿತು ಮಠದ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ಹಿಂದಿನ ಕಾಲದಲ್ಲಿ ಒಂದು ಊರನ್ನು ಬೇರ್ಪಡಿಸುವುದು ಒಂದು ಬೆಟ್ಟ ಒಂದು ನದಿ. ಚಾತುರ್ಮಾಸ್ಯ ಕುಳಿತುಕೊಂಡ ಯತಿ ಊರನ್ನು ದಾಟಿ ಹೋಗುವುದು, ಒಂದು ಸೀಮೆಯನ್ನು ಬಿಡುವ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಚಾತುರ್ಮಾಸ್ಯ ವ್ರತವನ್ನು ಸಂಪೂರ್ಣಗೊಳಿಸಿದಂತಹ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೀತಾ ನದಿಯನ್ನು ದಾಟಿ ನಮ್ಮ ಸಂಚಾರವನ್ನು ಆರಂಭಿಸಿದ್ದಾರೆ. ಅವರ ಮಠಾಧೀಶರು 33ನೇ ಚಾತುರ್ಮಾಸ್ಯವನ್ನು ನೀಲಾವರದಲ್ಲಿ ಮಾಡಿದ್ದಾರೆ. ಅಷ್ಟಮಠಗಳ ಪೈಕಿ ಕಲ್ಯಾಣಪುರ ಹೊಳೆಯನ್ನು ದಾಟಿ ಸೀತಾ ನದಿ ಮತ್ತು ಸುವರ್ಣಾ ನದಿಯ ನಡುವೆ ಚಾತುರ್ಮಾಸ್ಯ ಕುಳಿತುಕೊಂಡಿರುವ ಮೊದಲ ಯತಿ ಎಂದು ಹೇಳಿದರು.

TAGGED:ChaturmasyaPejavara ShreePublic TVSri Krishna Mathudupiಉಡುಪಿಚಾತುರ್ಮಾಸ್ಯಪಬ್ಲಿಕ್ ಟಿವಿಪೇಜಾವರ ಶ್ರೀಗಳುಶ್ರೀ ಕೃಷ್ಣ ಮಠ
Share This Article
Facebook Whatsapp Whatsapp Telegram

You Might Also Like

Koppal Anjanadri
Districts

ಅಂಜನಾದ್ರಿಯಲ್ಲಿ ಮತ್ತೆ ವಿವಾದ – ಹೊರಗಿನ ಅರ್ಚಕರಿಂದ ಪೂಜೆ ಮಾಡಿಸಿದ ನೂತನ ಡಿಸಿ ಸುರೇಶ್

Public TV
By Public TV
3 minutes ago
Rishabh Shetty celebrated his birthday Kantara Set 1 2
Cinema

ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

Public TV
By Public TV
23 minutes ago
Kolar Students Fell Ill
Crime

ಶಾಲೆ ಬಳಿ ಇದ್ದ ನೇರಳೆ ತಿಂದು 7 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

Public TV
By Public TV
43 minutes ago
Wiaan Mulder
Cricket

ಬೌಂಡರಿಯಿಂದಲೇ 196 ರನ್‌ – ವೇಗದ ತ್ರಿಶತಕ ಸಿಡಿಸಿ ದಾಖಲೆ ಬರೆದ ಮುಲ್ಡರ್

Public TV
By Public TV
53 minutes ago
ananth kumar hegde
Bengaluru City

ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

Public TV
By Public TV
1 hour ago
IQBAL HUSSAIN 1
Districts

ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?