ನಡುರಸ್ತೆಯಲ್ಲಿ ಹಾಡಹಗಲೇ ರೌಡಿಶೀಟರ್ ಕೊಚ್ಚಿ ಕೊಲೆ

Public TV
1 Min Read
SMG Police 5

– ಬೆಚ್ಚಿ ಬಿದ್ದ ಶಿವಮೊಗ್ಗದ ಜನತೆ

ಶಿವಮೊಗ್ಗ : ನಗರದಲ್ಲಿ ಮಚ್ಚು, ಲಾಂಗ್ ಗಳು ಸದ್ದು ಮಾಡಿವೆ. ಬಸವನಗುಡಿ ಬಡಾವಣೆಯಲ್ಲಿ ಹಾಡಹಗಲೇ ರೌಡಿಶೀಟರ್ ಒಬ್ಬನ ಹತ್ಯೆ ನಡೆದಿದೆ. ಕೊಲೆಯಾದವನನ್ನು ಮಂಜುನಾಥ್ ಭಂಡಾರಿ (30) ಎಂದು ಗುರುತಿಸಲಾಗಿದೆ.

SMG POLICE 4

ಶಿವಮೊಗ್ಗದ ಬಸವನಗುಡಿ ಬಡಾವಣೆಯಲ್ಲಿ ರಸ್ತೆಯಲಿ ಹೋಗುತ್ತಿದ್ದ ವೇಳೆ ರೌಡಿ ಶೀಟರ್ ಮಂಜುನಾಥ್ ಭಂಡಾರಿ ಮೇಲೆ ದಾಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

SMG POLICE 2

ಹಾಡಹಗಲೇ ನಡು ರಸ್ತೆಯಲ್ಲಿ ನಡೆದ ಕೊಲೆಯಿಂದಾಗಿ ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಘಟನೆ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *