– ಕಲ್ಲು, ಕೋಲುಗಳಿಂದ ಹೊಡೆದಾಟ
ಭೋಪಾಲ್: ಹಣದ ವಿಚಾರವಾಗಿ ನಡುರಸ್ತೆಯಲ್ಲಿ ಮಂಗಳಮುಖಿಯರು ಹೊಡೆದಾಡಿಕೊಂಡಿರುವ ಘಟನೆ ಮಧ್ಯ ಪ್ರದೇಶದ ಚಿಂದ್ವಾಡ ನಗರದಲ್ಲಿ ಭಾನುವಾರ ನಡೆದಿದೆ. ನಗರದ ರಾಮಕೋನ ಹಾಟ್ ಬಜಾರ್ ಮುಖ್ಯರಸ್ತೆಯಲ್ಲಿ ಗಲಾಟೆ ನಡೆದಿದೆ.
ನಡುರಸ್ತೆಯಲ್ಲಿ ಮಂಗಳಮುಖಿಯರು ಕೋಲುಗಳನ್ನ ಹಿಡಿದು ಕಲ್ಲೆಸೆದು ಓಡಾಡಿಸಿಕೊಂಡು ಹಲ್ಲೆ ನಡೆಸುತ್ತಿದ್ದರು. ಸ್ಥಳೀಯರು ಮಂಗಳಮುಖಿಯರ ಸಮಸ್ಯೆ ಪರಿಹರಿಸಲು ಸಹ ಮುಂದಾಗಿ ಎಲ್ಲರನ್ನ ಶಾಂತಗೊಳಿಸಿದ್ದಾರೆ. ಕೆಲವರು ಪೊಲೀಸರಿಗೆ ಸಹ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಮಕೋನಾ ಹಾಟ್ ಬಜಾರಿನಲ್ಲಿ ಎರಡು ಮಂಗಳಮುಖಿಯರ ಗುಂಪುಗಳು ಹಣ ಎತ್ತುತ್ತಾರೆ. ಆದ್ರೆ ನಾಗ್ಪುರದಿಂದ ಬಂದ ಇಬ್ಬರು ಮಂಗಳಮುಖಿಯರು ಸಹ ಹಣ ಸಂಗ್ರಹಣೆಗೆ ಮುಂದಾಗಿದ್ದರು. ಇದೇ ವಿಷಯಕ್ಕೆ ಎರಡೂ ಗುಂಪುಗಳು ನಡುವೆ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಗಲಾಟೆಯಲ್ಲಿ ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಗುಂಪುಗಳು ದೂರು ಸಲ್ಲಿಸಿವೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗ್ತಿದೆ ಎಂದು ಎಎಸ್ಪಿ ಸಂಜೀವ್ ಹೇಳಿದ್ದಾರೆ.