ನಂಬಿಕೆ ಕಳ್ಕೊಂಡಿದ್ರು- ಸುಶಾಂತ್‍ಗೆ ಚಿಕಿತ್ಸೆ ನೀಡಿದ್ದ ವೈದ್ಯರ ವಿಚಾರಣೆ

Public TV
1 Min Read
sushanth 1

-ಸುಶಾಂತ್ ಚಿಕಿತ್ಸೆ ಪಡೆದುಕೊಳ್ತಿದ್ಯಾಕೆ?

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಾವಿನ ರಹಸ್ಯ ಇನ್ನೂ ನಿಗೂಢವಾಗಿದೆ. ಮುಂಬೈ ಪೊಲೀಸರು ಸಹ ಸುಶಾಂತ್ ಆಪ್ತ ವಲಯ, ವೃತ್ತಿಪರ ಗೆಳೆಯರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸುಶಾಂತ್ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವೈದ್ಯರೊಬ್ಬರು ಸುಶಾಂತ್ ಎಲ್ಲರ ಮೇಲಿನ ನಂಬಿಕೆ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

Sushant Singh Rajput 2

2019 ನವೆಂಬರ್ ನಿಂದ ಸುಶಾಂತ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈ ಸಂಬಂಧ ಮೂವರು ಮನೋಚಿಕಿತ್ಸೆ ವೈದ್ಯರಿಂದ ಮುಂಬೈ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸುಶಾಂತ್ ಬಾಯಿಪ್ಲೊರ್ ಡಿಸ್ ಆರ್ಡರ್ ನಿಂದ ಬಳಲುತ್ತಿದ್ದರು. ಸುಶಾಂತ್ ತುಂಬಾನೇ ಒತ್ತಡದಲ್ಲಿರೋದು ನಮ್ಮ ಗಮನಕ್ಕೂ ಬಂದಿತ್ತು. ಆದ್ರೆ ಈ ಒತ್ತಡಕ್ಕೆ ಕಾರಣ ಏನು ಎಂಬುವುದು ನಮಗೆ ತಿಳಿದಿಲ್ಲ. ಸುಶಾಂತ್ ತಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ನಂಬಿಕೆ ಹೊಂದಿರಲಿಲ್ಲ. ಹಾಗಾಗಿ ವಿಷಯಗಳನ್ನು ಗುಟ್ಟಾಗಿ ಇಟ್ಟುಕೊಳ್ಳುತ್ತಿದ್ರು ಎಂದು ವೈದ್ಯರೊಬ್ಬರು ಪೊಲೀಸರ ಮುಂದೆ ಹೇಳಿದ್ದಾರೆ ಎಂದು ಪ್ರಕಟವಾಗಿದೆ.

Sushant B

ವೈದ್ಯರ ಮೇಲೆ ವಿಶ್ವಾಸವಿಲ್ಲದ ಕಾರಣ ಮೂವರು ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇನ್ನೂ ಚಿಕಿತ್ಸೆಗೂ ಎರಡ್ಮೂರು ಬಾರಿ ಮಾತ್ರ ಭೇಟಿ ನೀಡಿದ್ದರು. ವೈದ್ಯರು ನೀಡಿದ ಮಾತ್ರೆಗಳನ್ನು ಸಹ ಸುಶಾಂತ್ ತೆಗೆದುಕೊಳ್ಳುತ್ತಿರಲಿಲ್ಲ. ಕೊನೆಯ ವೈದ್ಯರು ಸಹ ಸುಶಾಂತ್ ಗೆ ಬಾಯಿಪ್ಲೊರ್ ಡಿಸ್ ಆರ್ಡರ್ ಚಿಕಿತ್ಸೆ ನೀಡಿದ್ದರು. ವೈದ್ಯರ ಹೇಳಿಕೆ ಪ್ರಕಾರ, ಸುಶಾಂತ್ ಒತ್ತಡದಲ್ಲಿ ಸಿಲುಕಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಖಚಿತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *