Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೇಶದ ರೈತರಿಗೆ ವರದಾನವಾಗಲಿರುವ ಸಿಎನ್‍ಜಿ ಟ್ರಾಕ್ಟರ್ – ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದೇಶದ ರೈತರಿಗೆ ವರದಾನವಾಗಲಿರುವ ಸಿಎನ್‍ಜಿ ಟ್ರಾಕ್ಟರ್ – ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ

Latest

ದೇಶದ ರೈತರಿಗೆ ವರದಾನವಾಗಲಿರುವ ಸಿಎನ್‍ಜಿ ಟ್ರಾಕ್ಟರ್ – ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ

Public TV
Last updated: February 13, 2021 6:45 pm
Public TV
Share
5 Min Read
Murugesh Nirani Nitin Gadkari CNG Tractor 1
SHARE

– ಸಚಿವ ನಿರಾಣಿ ಸಂಸ್ಥೆಯಿಂದ ಕರ್ನಾಟಕದಲ್ಲಿ ಸಿಎನ್‍ಜಿ ಟ್ರಾಕ್ಟರುಗಳ ಉತ್ಪಾದನೆ
– ಇದು ಸಂಪೂರ್ಣ ಮಾಲಿನ್ಯ ಮುಕ್ತ ಹಾಗೂ ಪರಿಸರ ಸ್ನೇಹಿ

ನವದೆಹಲಿ: ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಡೀಸೆಲ್ ಟ್ರಾಕ್ಟರ್ ಅನ್ನು ಎಂಅರ್ ಎನ್ ಸಮೂಹ ಸಂಸ್ಥೆಯು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ವಾಹನವಾಗಿ ಪರಿವರ್ತಿಸುವತ್ತ ದೃಡ ಹೆಜ್ಜೆ ಇಟ್ಟಿದೆ.

ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭಾರತದ ಮೊದಲ “ಸಿಎನ್‍ಜಿ ಟ್ರ್ಯಾಕ್ಟರ್” ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಎಂಅರ್ ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕರ ನಿದೇರ್ಶಕರಾದ ವಿಜಯ್ ನಿರಾಣಿ ಅವರು ಲೋಕರ್ಪಾಣೆ ಮಾಡಿದರು.

Murugesh Nirani Nitin Gadkari CNG Tractor 1

ಈಗಾಗಲೇ ಸಕ್ಕರೆ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದರ ಜೊತೆಗೆ ಇತರೆ ಕೃಷಿ ಆಧಾರಿತ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಎಂಆರ್ ಎನ್ ಸಮುಹಾ ಸಂಸ್ಥೆಯೂ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಲು ರಾಮ್ಯಾಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಎಂಆರ್ ಎನ್ ಸಮೂಹದ ಭಾಗವಾಗಿರುವ ಲೀಫಿನಿಟಿ ಬಯೋ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮೊದಲ ಹಂತದಲ್ಲಿ 500 ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಎಂಜಿನ್ ಟ್ರಾಕ್ಟರುಗಳಾಗಿ ಪರಿವರ್ತಿಸುವ ಯೋಜನೆಯನ್ನು ಹಾಕಿಕೊಂಡಿದೆ. 2023 ರ ವೇಳೆಗೆ 1,500 ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸುವ ಗುರಿಯನ್ನು ಇಟ್ಟುಕೊಂಡಿದೆ. ಸಿಎನ್‍ಜಿ ಟ್ರ್ಯಾಕ್ಟರ್ ನ ಎಂಜಿನ್ 10 ರಿಂದ 15 ವರ್ಷಗಳಷ್ಟು ಬಾಳಿಕೆ ಬರಲಿದೆ. ಎಂಆರ್ ಎನ್ ಸಮೂಹವು ಶೀಘ್ರದಲ್ಲೇ ಸಿಎನ್‍ಜಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಇದರಲ್ಲಿ ಎಂಜಿನ್ ಪರಿವರ್ತನೆ ಮತ್ತು ಸಿಎನ್‍ಜಿ ಅನಿಲ ಕೇಂದ್ರವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಶೀಘ್ರದಲ್ಲೇ ಸ್ಥಾಪಿಸಲು ತೀರ್ಮಾನಿಸಿದೆ.

Murugesh Nirani Nitin Gadkari CNG Tractor 4

‘ಆತ್ಮನಿರ್ಭರ ಭಾರತ್’ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯಂತೆ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬಿಗಳನ್ನಾಗಿ ಮಾಡುವ ಕನಸನ್ನು ಸಾಕಾರಗೊಳಿಸುವ ಮಹತ್ವದ ಹೆಜ್ಜೆಯಾಗಿ ದೇಶದಲ್ಲಿ ಮೊದಲ ಸಿಎನ್‍ಜಿ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಅನಿಲ (ಸಿಎನ್‍ಜಿ) ಟ್ರಾಕ್ಟರ್ ಆಗಿ ಪರಿವರ್ತಿಸಲಾಗಿದೆ. ಇದು ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಬಹಳ ಸಹಾಯ ಮಾಡಲಿದ್ದು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿಯನ್ನು ಸಾಧಿಸಲು ಪ್ರಮುಖ ಪಾತ್ರ ವಹಿಸಲಿದೆ.

ರಾಮ್ಯಾಟ್ ಟೆಕ್ನೋ ಸೊಲ್ಯೂಷನ್ಸ್ ಮತ್ತು ತೋಮಸೆಟ್ಟೊ ಅಚಿಲ್ಲೆ ಇಂಡಿಯಾ ಜಂಟಿಯಾಗಿ ಮಾಡಿದ ಈ ಪರಿವರ್ತನೆಯು ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ ವೆಚ್ಚವನ್ನು ಕಡಿಮೆ ಮಾಡಿ ಗ್ರಾಮೀಣ ಭಾರತದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

Murugesh Nirani Nitin Gadkari CNG Tractor 4

ರೈತರಿಗೆ ಹೆಚ್ಚಿನ ಅನುಕೂಲ:
ಇದರಿಂದ ರೈತನಿಗೆ ಪ್ರಮುಖ ಲಾಭವೆಂದರೆ ಇಂಧನ ವೆಚ್ಚದಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ.ಗಿಂತ ಹೆಚ್ಚಿನ ಹಣ ಉಳಿತಾಯ ಅಗಲಿದೆ. ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಿ ಆ ಮೂಲಕ ಇಂಧನ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಹೆಚ್ಚಿಸಲು ಇದು ಅನುಕೂಲವಾಗಲಿದೆ. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವುದರಿಂದ ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಡೀಸೆಲ್ ಚಾಲನೆಯಲ್ಲಿರುವ ಎಂಜಿನ್‍ಗೆ ಹೋಲಿಸಿದರೆ ಈ ವಾಹನ ಹೆಚ್ಚಿನ ಶಕ್ತಿ ಉತ್ಪಾದಿಸುತ್ತದೆ. ಡೀಸೆಲ್‍ಗೆ ಹೋಲಿಸಿದರೆ ಒಟ್ಟಾರೆ ಹೊರಸೂಸುವಿಕೆಯು ಶೇಕಡಾ 70 ರಷ್ಟು ಕಡಿಮೆಯಾಗುತ್ತದೆ. ಮೂರನೆಯದಾಗಿ, ಪ್ರಸ್ತುತ ಡೀಸೆಲ್ ಬೆಲೆ ಲೀಟರ್‍ಗೆ 77.43 ರೂ ಆಗಿದ್ದು, ಸಿಎನ್‍ಜಿ ಕೇವಲ ಕೆಜಿಗೆ 42 ರೂ. ಇದೆ. ಇದರಿಂದ ದರ ವೆಚ್ಚದಲ್ಲಿ ಶೇಕಡಾ 50 ರಷ್ಟು ಉಳಿತಾಯ ಮಾಡಲು ಇದು ರೈತರಿಗೆ ಸಹಾಯಕವಾಗಿದೆ.

Murugesh Nirani Nitin Gadkari CNG Tractor 3

ಸಿಎನ್‍ಜಿ ಶುದ್ಧ ಇಂಧನವಾಗಿದ್ದು, ಇಂಗಾಲ ಮತ್ತು ಇತರ ಮಾಲಿನ್ಯಕಾರಕಗಳ ಕಡಿಮೆ ಅಂಶವನ್ನು ಹೊಂದಿದೆ. ಇದು ಶೂನ್ಯ ಸೀಸವನ್ನು ಹೊಂದಿರುವುದರಿಂದ ನಾಶಕಾರಿಯಲ್ಲ. ಹೀಗಾಗಿ ಎಂಜಿನ್‍ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆ ಕಡಿಮೆ ನಿರ್ವಹಣೆ ಇರುತ್ತದೆ. ಸಿಎನ್‍ಜಿ ಟ್ರಾಕ್ಟರುಗಳ ಎಂಜಿನ್ ಸಾಮಾರ್ಥ್ಯವು ಹೆಚ್ಚಾಗಿದ್ದು, ಮಾಲಿನ್ಯ ರಹಿತವಾಗಿದೆ. ಡೀಸೆಲ್ ಟ್ರಾಕ್ಟರುಗಳಿಗಿಂತ ಸಾಮರ್ಥ್ಯ ಹೊಂದಿರುವುದು ಮತ್ತೊಂದು ವಿಶೇಷವಾಗಿರುವುದರಿಂದ ಇದು ರೈತರಿಗೆ ಎಲ್ಲಾ ರೀತಿಯಲ್ಲೂ ಹೆಚ್ಚಿನ ಲಾಭ ಉಂಟು ಮಾಡಲಿದೆ.

1 ಟ್ರಿಲಿಯನ್ ಉಳಿತಾಯ: ಡೀಸೆಲ್ ಟ್ರಾಕ್ಟರ್ ಅನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ಟ್ರಾಕ್ಟರ್ ಆಗಿ ಪರಿವರ್ತಿಸಲಾಗಿದೆ. ಇದು 1 ಟ್ರಿಲಿಯನ್ (1 ಲಕ್ಷ ಕೋಟಿ) ಯಷ್ಟು ಇಂಧನವನ್ನು ಉಳಿಸಲಿದೆ. ಆ ಮೂಲಕ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

Launching India's first 'CNG Tractor' https://t.co/WUobQ3Avya

— Nitin Gadkari (@nitin_gadkari) February 12, 2021

ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಿ ಆ ಮೂಲಕ ಇಂಧನ ವೆಚ್ಚವನ್ನು ಕಡಿಮೆ ಮಾಡುಬಹುದು ಎಂದು ಹೇಳಿದರು. ಜೊತೆಗೆ ಇದರ ದಕ್ಷತೆಯನ್ನು ಹೆಚ್ಚಿಸಬಹುದು. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವುದರಿಂದ ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಪ್ರತಿ ಲೀಟರ್ ಡೀಸೆಲ್‍ಗೆ 77 ರೂ.ಗಿಂತ ಹೆಚ್ಚು ಖರ್ಚು ಮಾಡುವ ರೈತರು ಪ್ರತಿ ಲೀಟರ್ ಸಿಎನ್‍ಜಿಗೆ 42 ರೂ.ಗಿಂತ ಕಡಿಮೆ ಖರ್ಚು ಮಾಡಬಹುದು. ಇದರಿಂದಾಗಿ ಗಮನಾರ್ಹ ಗಣನೀಯವಾಗಿ ಹಣವನ್ನು ಉಳಿಸಬಹುದು.

ಸಿಎನ್‍ಜಿ ಟ್ರಾಕ್ಟರುಗಳ ಎಂಜಿನ್ ಸಾಮಾರ್ಥ್ಯ 9 ವು ತುಂಬಾ ಉತ್ತಮವಾಗಿದ್ದು, ಮಾಲಿನ್ಯ ರಹಿತವಾಗಿದೆ. ಸಿಎನ್ ಜಿ ಟ್ರಾಕ್ಟರ್ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಸಿಎನ್‍ಜಿ ಮೂಲಕ ಸಂಪತ್ತನ್ನು ರೈತರು ಪರಿವರ್ತಿಸಬಹುದು. ಇದು ಪರಿಸರ ಆರ್ಥಿಕತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

1 17

ಡೀಸೆಲ್ ಟ್ರಾಕ್ಟರುಗಳಿಗಿಂತ ಸಾಮರ್ಥ್ಯ. ಇದು ಶೂನ್ಯ ಸೀಸ ಮತ್ತು ನಾಶಕಾರಿ ಅಲ್ಲ. ದುರ್ಬಲಗೊಳಿಸದ ಮತ್ತು ಮಾಲಿನ್ಯಕಾರಕವಲ್ಲದ ಎಂಜಿನ್‍ನ ಜೀವನದಲ್ಲಿ ಸಹಾಯ ಮಾಡುತ್ತದೆ. ಮತ್ತು ಇದಕ್ಕೆ ಕಡಿಮೆ ನಿಯಮಿತ ನಿರ್ವಹಣೆ ಅಗತ್ಯವಿರುತ್ತದೆ.” ಸಿಎನ್‍ಜಿ ಟ್ಯಾಂಕ್‍ಗಳು ಬಿಗಿಯಾದ ಮುದ್ರೆಯೊಂದಿಗೆ ಬರುವುದರಿಂದ ತಜ್ಞರು ತಂತ್ರಜ್ಞಾನವನ್ನು ಸುರಕ್ಷಿತವಾಗಿಸುತ್ತಾರೆ. ಇದು ಇಂಧನ ತುಂಬುವಾಗ ಅಥವಾ ಸೋರಿಕೆಯಾದಾಗ ಸ್ಫೋಟದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

2 11

ಇದರಿಂದಾಗಿ ರೈತರ ಜೀವನ ಮಟ್ಟ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸುವ ಮೂಲಕ ದೇಶದ ಪ್ರತಿಯೊಬ್ಬ ರೈತರ ಜೀವನ ಮಟ್ಟ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಹಾಗೂ ಆದಾಯವನ್ನು ದ್ವಿಗುಣಗೊಳಿಸಿ ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು, ಹಲವಾರು ಕ್ರಮಗಳನ್ನು ಕೈಗೊಂಡಿರುವುದು ನಮ್ಮ ರೈತರ ಸಬಲೀಕರಣದ ಪ್ರಮುಖ ಹೆಜ್ಜೆಯಾಗಿದೆ.

3 6

ಕೇಂದ್ರ ಭೂ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಕೃಷಿ ರಾಜ್ಯ ಸಚಿವ ಪುರಷೋತ್ತಮ್ ರೂಪಾಲ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್, ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಮತ್ತು ಎಂಆರ್‍ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಸಿಎನ್‍ಜಿ ಟ್ರಾಕ್ಟರ್ ಗೆ ಒಪ್ಪಂದ ಮಾಡಿಕೊಳ್ಳಲಾಯಿತು.

TAGGED:Aatmanirbhar BharatCNG TractorMurugesh niraninitin gadkariPublic TVಆತ್ಮನಿರ್ಭರ ಭಾರತನಿತಿನ್ ಗಡ್ಕರಿಪಬ್ಲಿಕ್ ಟಿವಿಮುರುಗೇಶ್ ನಿರಾಣಿಸಿಎನ್‍ಜಿ ಟ್ರಾಕ್ಟರ್
Share This Article
Facebook Whatsapp Whatsapp Telegram

Cinema news

gilli rashika
ಗಿಲ್ಲಿ ಜೊತೆ ಜಗಳಕ್ಕೆ ಬಿದ್ದ ರಾಶಿಕಾ; ಕಾರಣವೇನು ಗೊತ್ತಾ?
Cinema Latest Top Stories TV Shows
Drishyam 3
ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್: ಸಸ್ಪೆನ್ಸ್ ಥ್ರಿಲ್ಲರ್ ಸೀಕ್ವೆಲ್‌ಗೆ ಜನ ಕಾತುರ 
Cinema Latest South cinema Top Stories
bigg boss
ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕ್ಕೆ ನೂರು ದಿನಗಳ ಸಂಭ್ರಮ; ಆಟ ಇಲ್ಲಿಗೆ ಮುಗಿದಿಲ್ಲ!
Cinema Latest Top Stories TV Shows
kiccha sudeep priya sudeep
ಕಿಚ್ಚನ ಪತ್ನಿಯ ಹುಟ್ಟುಹಬ್ಬ – ಹೊಸ ಪ್ರತಿಭೆಗಳಿಗೆ ಅವಕಾಶ ಘೋಷಣೆ
Cinema Latest Sandalwood Top Stories

You Might Also Like

iran protest 1
Latest

ಆರ್ಥಿಕ ಅಧಃಪತನ; ಇರಾನ್‌ನಲ್ಲಿ ಹಿಂಸಾಚಾರಕ್ಕೆ 35 ಬಲಿ – 1,200 ಮಂದಿ ಬಂಧನ

Public TV
By Public TV
6 hours ago
MB Patil
Districts

ಜ.9ರಂದು ಜಿಲ್ಲೆಯ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ-ಶಂಕುಸ್ಥಾಪನೆ: ಎಂ.ಬಿ ಪಾಟೀಲ್

Public TV
By Public TV
7 hours ago
tumakuru suicide
Crime

ತುಮಕೂರು| ಮಕ್ಕಳೊಂದಿಗೆ ಸಂಪಿಗೆ ಬಿದ್ದು ತಾಯಿ ಆತ್ಮಹತ್ಯೆ

Public TV
By Public TV
7 hours ago
03 4
Big Bulletin

ಬಿಗ್‌ ಬುಲೆಟಿನ್‌ 06 January 2026 ಭಾಗ-3

Public TV
By Public TV
7 hours ago
bolero accident chitradurga
Chitradurga

ಚಿತ್ರದುರ್ಗ| ಮರಕ್ಕೆ ಬೊಲೆರೊ ಡಿಕ್ಕಿ – ನಾಲ್ವರು ದುರ್ಮರಣ

Public TV
By Public TV
7 hours ago
01 4
Big Bulletin

ಬಿಗ್‌ ಬುಲೆಟಿನ್‌ 06 January 2026 ಭಾಗ-1

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?