ಚಿಕ್ಕಬಳ್ಳಾಪುರ: ತೋಟದ ಮನೆಯಲ್ಲಿ ನಾಡಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಅಸಾಮಿಯನ್ನ ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಗುಂಗೀರ್ಲಹಳ್ಳಿ ಗ್ರಾಮದ ಗಂಗಾಧರ್ ಬಂಧಿತ ವ್ಯಕ್ತಿ. ಬಂಧಿತ ಗಂಗಾಧರ್ ಬಳಿ ಎರಡು ನಾಡಬಂದೂಕುಗಳು ಹಾಗೂ ನಾಡಬಂದೂಕು ಮಾಡೋಕೆ ಬೇಕಾಗಿರೋ ಸಲಕರಣೆಗಳು ಹಾಗೂ ಬಂದೂಕಿಗೆ ತುಂಬಲಾಗುವ ಗನ್ ಪೌಡರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಗ್ಲೀರ್ಲಹಳ್ಳಿ ಗ್ರಾಮ ಹೊರವಲಯದಲ್ಲಿ ತೋಟದಲ್ಲಿ ಮನೆ ಕಟ್ಟಿಕೊಂಡು ವ್ಯವಸಾಯ ಮಾಡಿಕೊಂಡು ವಾಸವಾಗಿರುವ ಗಂಗಾಧರ್ ನಾಡಬಂದೂಕು ಮಾಡೋದರಲ್ಲಿ ಎಕ್ಸ್ ಫರ್ಟ್ ಆಗಿದ್ದಾನೆ. ತಾನೇ ನಾಡಬಂದೂಕು ತಯಾರಿ ಮಾಡೋಕೆ ಬೇಕಾದ ಕಚ್ಛಾ ಸಾಮಾಗ್ರಿಗಳನ್ನ ಸಂಗ್ರಹಿಸಿ, ತನ್ನ ಮನೆಯ ಮುಂದಿನ ಕುಲುಮೆಯಲ್ಲೇ ನಾಡಬಂದೂಕು ರೆಡಿ ಮಾಡುತ್ತಿದ್ದನು.
ಹಲವು ದಿನಗಳಿಂದ ಕದ್ದು ಮುಚ್ಚಿ ನಾಡಬಂದೂಕುಗಳನ್ನ ತಯಾರಿಸಿ ಮಾರಾಟ ಮಾಡಿ 5 ರಿಂದ 10 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಂದಿಗಿರಿಧಾಮ ಪೊಲೀಸರು ನಾಡಬಂದೂಕು ಆರೋಪಿ ಗಂಗಾಧರ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಈಗಾಗಲೇ ತಯಾರಿಸಿದ್ದ 2 ನಾಡಬಂದೂಕು ಹಾಗೂ ತಯಾರಿ ಮಾಡಲು ಇಟ್ಟುಕೊಂಡಿದ್ದ ಸಲಕರಣೆಗಳನ್ನ ವಶಕ್ಕೆ ಪಡೆದಿದ್ದಾರೆ.
ಗಂಗಾಧರ್ ಬಳಿ ನಾಡಬಂದೂಕು ಖರೀದಿಸಿದ್ದ ರಾಜಾ ಹನುಮಂತಯ್ಯ ಹಾಗೂ ಅನಿಲ್ ಪೊಲೀಸರ ದಾಳಿ ವೇಳೆ ನಾಡಬಂದೂಕು ರಿಪೇರಿಗೆ ಬಂದು ತಗಲಾಕ್ಕೊಂಡಿದ್ದಾರೆ. ಇಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ಅವರ ಬಳಿ ಇದ್ದ ನಾಡಬಂದೂಕು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಗಂಗಾಧರ್ ಹಾಗೂ ಮತ್ರಿಬ್ಬರನ್ನ ವಶಕ್ಕೆ ಪಡೆದಿರುವ ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಕಾಡು ಪ್ರಾಣಿಗಳ ಬೇಟೆಯಾಡೋಕೆ ಈ ಅಕ್ರಮ ನಾಡಬಂದೂಕುಗಳ ತಯಾರಿ ಮಾಡಿಕೊಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು. ಇದುವರೆಗೂ ಎಷ್ಟು ಜನಕ್ಕೆ ಈ ನಾಡಬಂದೂಕುಗಳನ್ನ ಅಕ್ರಮವಾಗಿ ಮಾಡಿಕೊಟ್ಟಿದ್ರು ಎಂಬ ಮಾಹಿತಿಯನ್ನ ಗಂಗಾಧರ್ ಬಳಿ ಪೊಲೀಸರು ಬಾಯಿಬಿಡಿಸುತ್ತಿದ್ದಾರೆ.