ತೀರುವಳಿ ಪತ್ರ ನೀಡಿ, ಸಾಲ ಕಟ್ಟುವಂತೆ ರೈತಗೆ ಎಸ್‍ಬಿಐ ಮತ್ತೆ ನೋಟಿಸ್

Public TV
1 Min Read
cng sbi notice

ಚಾಮರಾಜನಗರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ರೈತನಿಗೆ ತೀರುವಳಿ ಪತ್ರ ನೀಡಿದೆ. ಆದರೆ ಮೂರು ತಿಂಗಳ ನಂತರ ಸಾಲ ಕಟ್ಟುವಂತೆ ರೈತನಿಗೆ ಮತ್ತೆ ನೋಟಿಸ್ ನೀಡಿ ಎಡವಟ್ಟು ಮಾಡಿದೆ.

vlcsnap 2021 04 03 20h00m50s984 e1617460432806

ತಾಲೂಕಿನ ಬೇಡರಪುರದ ರೈತ ಶಿವಸ್ವಾಮಿ ಅವರಿಗೆ ಎಸ್‍ಬಿಐ ನೋಟಿಸ್ ನೀಡಿದೆ. 10 ಲಕ್ಷ ರೂಪಾಯಿ ಬೆಳೆ ಸಾಲ ಬಾಕಿ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ. ಮೂರು ತಿಂಗಳ ಹಿಂದಷ್ಟೇ ಯಾವುದೇ ಬಾಕಿ ಇಲ್ಲ ಎಂದು ರೈತನಿಗೆ ಬ್ಯಾಂಕ್ ಸಾಲ ತೀರುವಳಿ ಪತ್ರ ನೀಡಿದೆ. ಸಾಲ ಮನ್ನಾ ಆಗಿದೆ ಎಂದು ರೈತ ಶಿವಸ್ವಾಮಿ ಖುಷಿಯಾಗಿದ್ದರು. ಆದರೆ ಇದೀಗ ದಿಢೀರನೆ ಬಂದ ನೋಟಿಸ್ ನೋಡಿ ಕಂಗಾಲಾಗಿದ್ದಾರೆ.

vlcsnap 2021 04 03 20h00m13s311 e1617460463981

ವಿಷಯ ತಿಳಿದು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ನೋಟಿಸ್ ಹಿಂಪಡೆದು ನೋ ಡ್ಯೂ ಸರ್ಟಿಫಿಕೇಟ್ ನೀಡುವುದಾಗಿ ಬ್ಯಾಂಕ್ ವ್ಯವಸ್ಥಾಪಕ ಲಿಖಿತ್ ತಿಳಿಸಿದರು. ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *